ನವರಾತ್ರಿ – ‘ರಿಯಲ್ ಹೀರೋ’ಗೆ ವಿಭಿನ್ನವಾಗಿ ಗೌರವ ಸಲ್ಲಿಸಿದ ದುರ್ಗಾ ಪೂಜಾ ಸಮಿತಿ
ಮೊದಲ ಬಾರಿಗೆ ಕೊರೊನಾ ಹಾವಳಿಯಿಂದಾದ ಲಾಕ್ ಡೌನ್ ನಿಂದ ಹಿಡಿದು ಇಲ್ಲಿ ವರೆಗೂ ಬಡವರು , ವಿದ್ಯಾರ್ಥಿಗಳು , ರೈತರು , ವಲಸೆ ಕಾರ್ಮಿಕರು ಹೀಗೆ ಸಹಾಯ ಕೇಳಿದವರಿಗೆ ತಮ್ಮ ಕೈಲಾದ ಸಹಾಯಗಳನ್ನ ಮಾಡುತ್ತಾ ರಿಯಲ್ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಅವರಿಗೆ ಆಗಾಗ ಅನೇಕರು ವಿಭಿನ್ನ ರೀತಿಗಳಲ್ಲಿ ಗೌರವ ಸಲ್ಲಿಸುತ್ತಿರುತ್ತಾರೆ. ಇದೀಗ ನವರಾತ್ರಿಯ ಪ್ರಯುಕ್ತ ಕೋಲ್ಕತ್ತಾದ ಕೆಸ್ತೋಪುರ್ ಪ್ರಫುಲ್ಲ ಕಾನನ್ ದುರ್ಗಾ ಪೂಜಾ ಸಮಿತಿಯು ರಿಯಕಲ್ ಹೀರೋ ಸೋನು ಸೂದ್ ಗೆ ವಿಭಿನ್ನವಾಗಿ ಗೌರವ ಸಮರ್ಪಿಸಿದೆ.
ಈ ವರ್ಷದ ನವರಾತ್ರಿ ಹಬ್ಬದ ಪ್ರಯುಕ್ತ ಕೆಸ್ತೋಪುರ್ ಪ್ರಫುಲ್ಲ ಕಾನನ್ ದುರ್ಗಾ ಪೂಜಾ ಸಮಿತಿ ಸುಂದರ್ ಬನ್ ಗ್ರಾಮದಲ್ಲಿ ಉಂಟಾದ ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾದ ಮೀನುಗಾರರಿಗೆ ಸೋನು ಸೂದ್ ಸಹಾಯ ಮಾಡಿರುವುದನ್ನು ಕಲ್ಪಿಸಿಕೊಂಡು ಕೆಲವು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ.
ಸೋನು ಸೂದ್ ಅವರ ಗಾತ್ರದ ಪ್ರತಿಮೆಯನ್ನು ನಿರ್ಮಿಸಿದ್ದು, ಫೋಟೋದಲ್ಲಿ ಸೋನು ಸೂದ್ ಕೈಯಲ್ಲಿ ಕವರ್ ಹಿಡಿದುಕೊಂಡು ಮೀನುಗಾರರಿಗೆ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಸುತ್ತ ಮುತ್ತ ಜನ, ಮಕ್ಕಳು, ಪುಟ್ಟ ಮನೆಗಳಿರುವ ಪ್ರತಿಮೆಗಳು ಗಮನ ಸೆಳೆಯುತ್ತಿವೆ.