ಸಲ್ಮಾನ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ ಕಿಚ್ಚ ಸುದೀಪ್..!
ಬಾಲಿವುಡ್ ನ ಸುಲ್ತಾನನಿಗೆ ಸ್ಯಾಂಡಲ್ ನ ಬಾದ್ ಷಾ ಆಕ್ಷನ್ ಕಟ್ ಹೇಳಲಿದ್ದಾರೆ ಎಮಬ ಸುದ್ದಿ ಸದ್ಯ ಸಖತ್ ಸೌಂಡ್ ಮಾಡ್ತಿದೆ. ಹೌದು ಕಿಚ್ಚ ಸುದೀಪ್ ಅಭಿನಯದ ಜೊತೆಗೆ ಅನೇಕ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಡೈರೆಕ್ಟರ್ ಆಗಿಯೂ ಸಕ್ಸಸ್ ಕಂಡಿದ್ದಾರೆ. ಮಾಣಿಕ್ಯ , ವೀರ ಮದಕರಿ , ಕೆಂಪೇಗೌಡ, ಜಸ್ಟ್ ಮಾತ್ ಮಾತಲ್ಲಿ, ಮೈ ಆಟೋಗ್ರಾಫ್ , ಶಾಂತಿ ನಿವಾಸ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಮಾಣಿಕ್ಯ ನಂತರ ಸುದೀಪ್ ಯಾವುದೇ ಸಿನಿಮಾಗಳ ನಿರ್ದೇಶನ ಮಾಡದೇ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ.
ಈ ನಡುವೆ ಕಿಚ್ಚ ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಮತ್ತೆ ನಿರ್ದೇಶನ ಮಾಡುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಅದಕ್ಕಾಗಿ ಚಿತ್ರಕಥೆಯನ್ನು ರೆಡಿಮಾಡಿಕೊಂಡಿದ್ದಾರಂತೆ ಸುದೀಪ್ ಅವರು. ಇನ್ನೂ ಎಕ್ಸೈಟಿಂಗ್ ವಿಚಾರ ಅಂದ್ರೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಗೆ ಸುದೀಪ್ ಅವರು ಆಕ್ಷನ್ ಕಟ್ ಹೇಳಲಿದ್ದಾರೆ ಅನ್ನೋದು. ಹಿಂದಿ ಹಾಗೂ ದಕ್ಷಿಣ ಭಾರತದ ಭಾಷೆಗಳಲ್ಲಿ ಕಿಚ್ಚ ಹೊಸ ಸಿನಿಮಾ ಮಾಡಬೇಕೆಂಬ ಉದ್ದೇಶ ಹೊಂದಿದ್ದು, ದಕ್ಷಿಣ ಭಾರತದ ಭಾಷೆಗಳಲ್ಲಿ ಸುದೀಪ್ ಹಾಗೂ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಬೇಕೆಂಬ ಆಲೋಚನೆ ಹೊಂದಿದ್ದಾರೆ.
RCB ಕಪ್ ಕನಸು ಭಗ್ನ – ಕಿಚ್ಚ ಸುದೀಪ್ ಹೇಳಿದ್ದೇನು..?
ಅಷ್ಟೇ ಅಲ್ದೇ ಈಗಾಗಲೇ ಈ ಸಂಬಂಧ ಸಲ್ಮಾನ್ ಖಾನ್ ಅವರನ್ನ ಸುದೀಪ್ ಸಂಪರ್ಕ ಮಾಡಿದ್ದಾರಂತೆ. ಅಲ್ಲದೇ ಈ ಬಗ್ಗೆ ಸೆಪ್ಟೆಂಬರ್ ನಲ್ಲಿಯೇ ಕಥೆ ಹೇಳಬೇಕಿತ್ತು. ಅದಕ್ಕಾಗಿ ಮುಂಬೈಗೆ ಹೋಗಬೇಕಿತ್ತು. ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಕಥೆ ಸಲ್ಮಾನ್ ಕಾನ್ ಅವರಿಗೆ ಒಪ್ಪಿಗೆಯಾಗುತ್ತೆ ಎಂದಿದ್ದಾರೆ. ಇನ್ನೂ ಸಲ್ಮಾನ್ ಖಾನ್ ಹಾಗೂ ನಾನು ಗೆಳೆಯರು ಎಂಬ ಕಾರಣಕ್ಕೆ ಸಲ್ಮಾನ್ ಅವರನ್ನ ಆಯ್ಕೆ ಮಾಡಿಲ್ಲ. ಅವರು ಆ ಪಾತ್ರಕ್ಕೆ ಸರಿಯಾದ ಆಯ್ಕೆ ಎಂದಿದ್ದಾರೆ.