ಅಖಿಲ್ ಕಾಟ್ಯಾಲ್ ಬರೆದಿರುವ ಶಾರುಖ್ ಮೇಲಿನ ಪದ್ಯ ವೈರಲ್…!
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬೆನ್ನಲ್ಲೇ , ಶಾರುಖ್ ಪರಿವಾರವನ್ನ ಒಂದೆಡೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗ್ತಿದೆ. ಮತ್ತೊಂದೆಡೆ ಶಾರುಖ್ ಹಾಗೂ ಕುಟುಂಬದ ಬೆಂಬಲಕ್ಕೆ ಅನೇಕರು ನಿಂತಿದ್ದಾರೆ. ಶಾರುಖ್ ಪುತ್ರ ಡ್ರಗ್ ಲಿಂಕ್ ಕೇಸ್ ನಲ್ಲಿ ಸದ್ಯ ಜೈಲಿನಲ್ಲಿದ್ದು, ಶಾರುಖ್ ಹಾಗೂ ಪತ್ನಿ ಗೌರಿ ಖಾನ್ ತೀವ್ರ ಒತ್ತಡದಲ್ಲಿದ್ದಾರೆ. ಈ ನಡುವೆ ಅನೇಕರು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದಾರೆ.
ಅಲ್ಲದೇ ಶಾರುಖ್ ಮೇಲೆ ಬರಹಗಾರ ಅಖಿಲ್ ಕಾಟ್ಯಾಲ್ ಬರೆದಿರುವ ಪದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಹೌದು. “ ಆತ ಒಮ್ಮೊಮ್ಮೆ ರಾಹುಲ್ , ಒಮ್ಮೊಮ್ಮೆ ಚಾರ್ಲಿ, ಒಮ್ಮೊಮ್ಮೆ ಮ್ಯಾಕ್ಸ್, ಆತ ಸುರಿಂದರ್ , ಹ್ಯಾರಿ, ದೇವದಾಸ್ , ವೀರ್ , ರಾಮ್ , ಮೋಹನ್ , ಮತ್ತು ಕಬೀರ ಕೂಡ ಹೌದು. ಆತ ಅಮರ್ , ರಿಜ್ವಾನ್ ಹಾಗೆಯೇ ರಯೀಸ್ ಹಾಗೂ ಜಹಂಗೀರ್ ಕೂಡ ಹೌದು. ಬಹುಶಃ ಇದಕ್ಕೇ ಇರಬೇಕು ಆತ ಜನರನ್ನು ಕಾಡುವುದು. ಒಬ್ಬ ಶಾರುಖ್ ಖಾನ್ ನಲ್ಲಿ ಹಿಂದೂಸ್ತಾನ ಅಡಗಿದೆ. ಎಂದು ಹಿಂದಿ ಹಾಗೂ ಉರ್ದು ಮಿಶ್ರಿತ ಪದ್ಯವನ್ನ ಬರೆದು ಕಾಟ್ಯಾಲ್ ಪೋಸ್ಟ್ ಮಾಡಿದ್ದರು. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.