ಶಾರುಖ್ ಸುಪುತ್ರನಿಗೆ ಕೊನೆಗೂ ಸಿಕ್ಕ ಜಾಮೀನು.
ಕೊನೆಗೂ ಶಾರುಖ್ ಸುಪುತ್ರ ಆರ್ಯಾನ್ ಖಾನ್ ಗೆ ಬಾಂಬೇ ಹೈಕೋರ್ಟ್ ಜಾಮಿನು ನೀಡಿ ಬಿಡುಗಡೆಗೊಳಿಸಿದೆ. ಕ್ರೂಸ್ ಹಡಗಿನಲ್ಲಿ ನಡೆಸಿದ ಐಷಾರಮಿ ಡ್ರಗ್ಸ್ ಪಾರ್ಟಿಯಲ್ಲಿ ಆರ್ಯಾನ್ ಖಾನ್ ಸೇರಿ ಆತನ ಸ್ನೇಹಿತರನ್ನ ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದರು. ಆರ್ಯನ್ ಖಾನ್ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ವಾದವನ್ನ ಆಲಿಸಿದ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅಕ್ಟೋಬರ್ 2 ರಂದು ಮುಂಬೈ ಸಮುದ್ರ ತೀರದಿಂದ ಗೋವಾಗೆ ಹೊರಟಿದ್ದ ಕ್ರೂಸ್ ಹಡಗನ್ನ ರೈಡ್ ಮಾಡಿದ ಎನ್ ಸಿ ಬಿ ಅಧಿಕಾರಿಗಳು ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಶಾರುಕ್ ಖಾನ್ ಪುತ್ರ ಆರ್ಯಾನ್ ಖಾನ್ ನ ವಶಕ್ಕೆ ಪಡಿಸಿಕೊಂಡಿದ್ದರು.
ಆರ್ಯಾನ್ ಖಾನ್ ವಿಚಾರಣೆಯಲ್ಲಿ ಇನ್ನೂ ಹಲವು ಬಾಲಿವುಡ್ ಮಂದಿಗೆ ಡ್ರಗ್ಸ್ ನಂಟು ಇರುವ ಸಾಕ್ಷ್ಯಗಳು ಸಿಕ್ಕಿದ್ದು ನಟಿ ಅನನ್ಯಪಾಂಡೆ ಸೇರಿದಂತೆ ಹಲವು ಜನರನ್ನ ಎನ್ ಸಿ ಬಿ ವಿಚಾರಣೆಗೆ ಒಳಪಡಿಸಿದೆ.
ಮೊದಲು ಸತೀಶ್ ಮಾನಶಿಂಧೆ ಆರ್ಯನ್ ಖಾನ್ ಪರವಾಗಿ ವಾದ ಮಂಡನೆ ಮಾಡಿದ್ದರು. ಈಗ ಪ್ರಕರಣದಲ್ಲಿ ಆರ್ಯನ್ ಖಾನ್ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ವಾದ ಮಂಡಿಸಿದ್ದರು.