ಕನ್ನಡದ ಬಗ್ಗೆ ಕವಿ ಪುಂಗವರ ಮಾತುಗಳು..
ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು?
ಮಹಲಿಂಗರಂಗ
#ಕರ್ನಾಟಕ_ರಾಜ್ಯೋತ್ಸವ
——————————————
ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ |
ಕನ್ನಡದ ನೆಲದ ನೀರ್ವೊಲೆನಗೆ ಜೀವನದಿ
ಕನ್ನಡದ ನೆಲದ ಕಲ್ಲೆನಗೆ ಸಾಲಿಗ್ರಾಮ ಶಿಲೆ
ಕನಡವೆ ದೈವಮೈ ಕನ್ನಡ ಶಬ್ದಮೆನಗೋಂಕಾರಮೀಯೆನ್ನ |
ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ
ಮಿನ್ನಾವುದೈಪೆರೆತು ಕನ್ನಡದ
ಸೇವೆಯಿಂದಧಿಕಮೀಜಗಧೊಳೆನಗೆ?
ಸಾಲಿ ರಾಮಚಂದ್ರರಾವ್
#ಕರ್ನಾಟಕ_ರಾಜ್ಯೋತ್ಸವ
————————————————
ಕರ್ನಾಟವೆಂಬುದಿದು ಕಾಳಿ-ರಣಗಾಳಿಯಿದು, ಭೋಂಕಾರ
ರವವ ಕೇಳಿ!
ಮಡಿವ ರಣ ಹೇಡಿಗಳ ಹೃದಯದಲಿ ತುಂಬುವಳು
ಕಡದಾದ ವೀರ್ಯ ಕಾಳಿ
ಶ್ರೀಧರ ಖಾನೋಳ್ಕರ್
#ಕರ್ನಾಟಕ_ರಾಜ್ಯೋತ್ಸವ