ಭಾರತದ ವಿಮಾನಯಾನಕ್ಕೆ ಪ್ರವೇಶ ಕೊಡದ ಪಾಕಿಸ್ತಾನ.
ಶ್ರೀನಗರದಿಂದ ಶಾರ್ಜಾಕ್ಕೆ ವಿಮಾನಯಾನವನ್ನ ಭಾರತದಿಂದ ಹೊಸದಾಗಿ ಪ್ರಾರಂಬಿಸಲಾಗಿದೆ. ಇದಕ್ಕೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಿಕೊಂಡು ಹೋಗಬೇಕು. ಆದರೆ ಇದಕ್ಕೆ ಪಾಕಿಸ್ತಾನವು ಅನುಮತಿಯನ್ನ ನಿರಾಕರಿಸಿದೆ.
ಮಂಗಳವಾರದಿಂದ ಪಾಕಿಸ್ತಾನದ ವಾಯುಪ್ರದೇಶವನ್ನು ತಪ್ಪಿಸಲು ಏರ್ಲೈನ್ ತನ್ನ ಮಾರ್ಗವನ್ನು ಬದಲಾಯಿಸಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 23 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸಿದಾಗ ಔಪಚಾರಿಕವಾಗಿ ಅಂತರರಾಷ್ಟ್ರೀಯ ವಿಮಾನಯಾನವನ್ನು ಪ್ರಾರಂಭಿಸಿದರು.
“ನಾವು ಈಗ ಪಾಕಿಸ್ತಾನದ ವಾಯುಪ್ರದೇಶವನ್ನು ತಪ್ಪಿಸಬೇಕಾಗಿದೆ ಎಂಬುದು ನಿಜ. ಇದು ಹಾರಾಟದ ಸಮಯವನ್ನು ಸುಮಾರು 45 ನಿಮಿಷಗಳಷ್ಟು ಹೆಚ್ಚಿಸಿದೆ ಎಂದು ವಿಮಾನಯಾನ ಅಧಿಕಾರಿ ತಿಳಿಸಿದ್ದಾರೆ. ವಿಮಾನವು ಈಗ 4 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದು ಗುಜರಾತ್ ಮೇಲೆ ಹಾರಲಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಂತಾರಾಷ್ಟ್ರೀಯ ವಿಮಾನ ಅಥವಾ ದೀರ್ಘ ಮಾರ್ಗವನ್ನು ನಿಷೇಧಿಸುವ ಪಾಕಿಸ್ತಾನದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲು ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಕುಲದೀಪ್ ಸಿಂಗ್ ನಿರಾಕರಿಸಿದರು. ಆದರೆ ಶ್ರೀನಗರ-ಶಾರ್ಜಾ ಮಾರ್ಗದ ವಿಮಾನವು “ಸಂಪೂರ್ಣ ಪ್ರಯಾಣಿಕರನ್ನು” ಹೊಂದಿದೆ ಎಂದು ಅವರು ಒತ್ತಿ ಹೇಳಿದರು.