ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಆಡಳಿತಾತ್ಮಕ ನಿರ್ಧಾರಗಳನ್ನ ತೆಗೆದುಕೊಳ್ಳಲಾಯಿತು. ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ಮಹತ್ವದ ತೀರ್ಮಾನಗಳ ಕುರಿತು ಕಾನೂನು ಸಚಿವ ಮಾಧುಸ್ವಾಮಿ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ.
- ಮುಂಬೈ ಕರ್ನಾಟಕವನ್ನ ಕಿತ್ತೂರು ಕರ್ನಾಟಕ ಎಂದು ಬದಲಾವಣೆ
- ನೇಕಾರ ಸಮುದಾದಯಕ್ಕೆ ಎಸ್ಸಿ, ಎಸ್ಟಿ ಹಣ ಬಳಕೆ ಮಾಡಲು ನಿರ್ಧಾರ
- ನೇಕಾರ ಸಮುದಾಯದವರಿಗೆ 376 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ
- ಬೃಹತ್ ಗಣಿಗಾರಿಕೆಗಳಿಗೆ ಸಚಿವ ಸಂಪುಟ ಸಭೆಯಿಂದ ಅನುಮತಿ
- ಬಳ್ಳಾರಿ ರಸ್ತೆ ಅಭಿವೃದ್ದಿಗೆ 30 ಕೋಟಿ ಯುಜಿಡಿ ಕಾಮಗಾರಿಗಾಗಿ 12 ಕೋಟಿ ಬಿಡುಗಡೆ
- 50 ಕೋಟಿ ಅಧಿಕ ಮೊತ್ತದ ಟೆಂಡರ್ ಕರೆಯಲು ಪಾರದರ್ಶಕ ವ್ಯವಸ್ಥೆ, ಏಕ ಗವಾಕ್ಷಿ ಪದ್ಧತಿ ಜಾರಿಗೆ ಚಿಂತನೆ.
- ನೂತನ ಮರಳು ನೀತಿ ಜಾರಿಗೆ ತರಲು ಸಮ್ಮತಿ.
- ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ 825 ಕೋಟಿ ರೂ. ಹಣ ಬಿಡುಗಡೆ.
1 ಮೆಟ್ರಿಕ್ ಟನ್ ಮರಳಿಗೆ 300 ರು ನಿಗದಿ, ನದಿ ಮರಳಿಗೆ 700 ನಿಗದಿ ಮಾಡಿದ ಸಚಿವ ಸಂಪುಟ