ರಾಜ್ಯದ ವಿದ್ಯಾರ್ಥಿಗಳಿಗೆ ಕಹಿ ಸುದ್ದಿ – ಈ ವರ್ಷವು ಇಲ್ಲ ಸೈಕಲ್ ಭಾಗ್ಯ
ಕರೋನಾ ರೋಗವು ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದರಿಂದ ಕಳೆದ ಎರಡು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸೈಕಲ್ ಭಾಗ್ಯ ಮರೀಚಿಕೆಯಾಗಿದೆ.
ಈ ವರ್ಷವು ಸಹಿತ ಮಕ್ಕಳಿಗೆ ಸೈಕಲ್ ವಿತರಣೆ ಸಾಧ್ಯವಿಲ್ಲ ಎನ್ನುವ ಮಾಹಿತಿ ಶಿಕ್ಷಣ ಇಲಾಖೆ ಯಿಂದ ಕೇಳಿ ಬರುತ್ತಿದೆ. ರಾಜ್ಯದ ಬಡ್ಜೆಟ್ ನಲ್ಲಿ ಸೈಕಲ್ ವಿತರಣೆಗೆಂದು ಹಣವನ್ನ ತೆಗೆದಿಟ್ಟಿಲ್ಲ. ಸರಕಾರ ದಿಂದ ಶಿಕ್ಷಣ ಇಲಾಖೆಗೆ ಅನುದಾನ ಬಂದರಷ್ಟೆ ಸೈಕಲ್ ವಿತರಣೆ ಸಾದ್ಯ ಎನ್ನುತ್ತಿವೆ ಶಿಕ್ಷಣ ಇಲಾಖೆಯ ಮೂಲಗಳು.
ಕಳೆದ ವರ್ಷ ಲಾಕ್ಡೌನ್ ಬಿಕ್ಕಟ್ಟು ಇದ್ದರೂ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಆಗಿನ ಸಿಎಂ ಯಡಿಯೂರಪ್ಪ ಹೇಳಿದ್ದರು . ಆದರೆ, 2021-22ನೇ ಶೈಕ್ಷಣಿಕ ಸಾಲಿನಲ್ಲಿಯೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಷ್ಟ ಎನ್ನಲಾಗುತ್ತಿದೆ. ಬಜೆಟ್ನಲ್ಲಿ ಇದಕ್ಕಾಗಿ ಅನುದಾನ ಮೀಸಲು ಇಟ್ಟಿಲ್ಲದಿರುವುದರಿಂದ ಸೈಕಲ್ ವಿತರಣೆ ಅನುಮಾನ ಎನ್ನಲಾಗುತ್ತಿದೆ.
2006-2007 ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಸಂದರ್ಭದಲ್ಲಿ ಉಚಿತ ಬೈಸಿಕಲ್ ವಿತರಣಾ ಯೋಜನೆಗೆ ಚಾಲನೆ ನೀಡಲಾಗಿತ್ತು.