ನಿಲ್ಲದ ಮಳೆ – ಗಗನಕ್ಕೇರಿದ ತರಕಾರಿ ಬೆಲೆ – ಗ್ರಾಹಕರ ಜೋಬಿಗೆ ಕತ್ತರಿ
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತರು ಬೆಳೆದಂತ ಬೆಳೆ ನೀರು ಪಾಲಾಗಿದೆ. ಕೊಯ್ಲಿಗೆ ಬಂದ ಬೆಳೆ ನೀರಲ್ಲಿ ಮುಳುಗಿ ಹೋಗಿವೆ. ಸೊಪ್ಪು, ತರಕಾರಿ ಸಮಯಕ್ಕೆ ಸರಿಯಾಗಿ ನಗರಗಳಿಗೆ ಪೂರೈಕೆ ಮಾಡಲಾಗದೆ ಬೆಲೆ ಗಗನ ಮುಟ್ಟುತ್ತಿವೆ. ನಗರದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ತರಕಾರಿ ಬೆಲೆ ಏರಿಕೆ ಆಗುತ್ತಲೆ ಇದೆ
ಬೀನ್ಸ್, ಈರುಳ್ಳಿ, ಟೊಮ್ಮಾಯೋ, ಹೀರೇಕಾಯಿ, ತೊಗರಿ ಕಾಯಿ, ಬೆಂಡೆಕಾಯಿ, ಬದನೆಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ 100 ರೂ ಗಡಿ ದಾಟಿದೆ. ಕ್ಯಾಪ್ಸಿಕಾಂ, ತೊಂಡೆಕಾಯಿ, ಕ್ಯಾರೇಟ್, ನುಗ್ಗೇಕಾಯಿ ಬೆಲೆ, ಸೊಪ್ಪಿನ ಬೆಲೆ ಗ್ರಾಹಕರಿಗೆ ಕೈಗೆಟುಕದಂತಾಗಿದೆ..
ಶುಕ್ರವಾರ ಕೋಲಾರದಲ್ಲಿ ಗುಣಮಟ್ಟದ ಟೊಮ್ಯಾಟೊ 15 ಕೆಜಿ ಬಾಕ್ಸ್ ಒಂದರ ಬೆಲೆ 1500 ರೂಪಾಯಿ ದಾಟಿದ್ದರೆ ಕೇವಲ ಒಂದೇ ಒಂದು ಲಾಟ್ ಪ್ರತಿ ಬಾಕ್ಸ್ಗೆ 2000 ರೂಪಾಯಿಗೆ ಹರಾಜಾಗಿ ದಾಖಲೆ ಬರೆದಿದೆ. ಇನ್ನು ಚಿಲ್ಲರೆ ಅಂಗಡಿಗಳಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 140 ರೂಪಾಯಿ ದಾಟಿದೆ.
ಮಳೆ ಇಲ್ಲವೆಂದರೆ ತರಕಾರಿ ಬೆಲೆ ಕಡಿಮೆ ಆಗುತ್ತೆ. ಮಳೆ ಬಂದರೆ ಎಲ್ಲ ತರಕಾರಿಗಳ ಬೆಲೆಯೂ ಏರಿಕೆ ಆಗುತ್ತೆ ಅಂತಾ ತಳ್ಳುವ ಗಾಡಿ ವ್ಯಾಪಾರಸ್ಥರು ಹೇಳುತ್ತಿದ್ದಾರೆ