ಓಮಿಕ್ರಾನ್ ಆತಂಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಪ್ರವಾಸ ರದ್ದು ??
ಕೊರೊನಾ ವೈರಸ್ ನ ಹೊಸ ರೂಪಾಂತರ ಓಮ್ರಿಕಾನ್ ನಿಂದಾಗಿ ದಕ್ಷಿಣ ಆಫ್ರಿಕಾಗೆ ಟೀಮ್ ಇಂಡಿಯಾ ಪ್ರವಾಸ ರದ್ದಾಗುವ ಇಲ್ಲಾ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.. ಮೂಲಗಳ ಪ್ರಕಾರ, ಮಂಡಳಿಯು ಈ ಪ್ರವಾಸವನ್ನು ಒಂದು ವಾರ ಮುಂದೂಡಬಹುದು. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಈ ನಡುವೆ ಈ ಪ್ರವಾಸಕ್ಕೆ ಸಂಬಂಧಿಸಿದಂತೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿಕೆಯೂ ಮುನ್ನೆಲೆಗೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆ ಇದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ಗೆ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ , ನಾವು ಬಿಸಿಸಿಐ ಜೊತೆ ಮಾತನಾಡುತ್ತಿದ್ದೇವೆ. ನಮಗೆ ಹೆಚ್ಚಿನ ಸ್ಪಷ್ಟತೆಯ ಅಗತ್ಯವಿದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಚಿತ್ರವು ಸ್ಪಷ್ಟವಾಗಲಿದೆ ಎಂದು ಭಾವಿಸುತ್ತೇವೆ. ರಾಹುಲ್ ಭಾಯ್ (ರಾಹುಲ್ ದ್ರಾವಿಡ್) ಎಲ್ಲಾ ಹಿರಿಯ ಆಟಗಾರರೊಂದಿಗೆ ಮಾತನಾಡಿದ್ದಾರೆ. ನಾವು ಯಾವುದೇ ರೀತಿಯ ಗೊಂದಲದಲ್ಲಿ ಉಳಿಯದೇ ಇರುವುದು ಮುಖ್ಯ.
ನಾವು ಸಾಮಾನ್ಯ ಸ್ಥಿತಿಯಲ್ಲಿ ಆಡುತ್ತಿಲ್ಲ. ನಾವು ಎಲ್ಲಾ ತಂಡದ ಸದಸ್ಯರೊಂದಿಗೆ ಮಾತನಾಡಿದ್ದೇವೆ. ಟೆಸ್ಟ್ ಪಂದ್ಯಗಳನ್ನು ಆಡುವುದರಿಂದ ನಮ್ಮ ಗಮನವನ್ನು ಕಸಿದುಕೊಳ್ಳುವುದಿಲ್ಲ, ಅದು ಏನೇ ಇರಲಿ, ಆದರೆ ನಾವು ಈ ವಿಷಯದಲ್ಲಿ ಸ್ಪಷ್ಟತೆಯನ್ನು ಬಯಸುತ್ತೇವೆ ಎಂದಿದ್ದಾರೆ..
ಇನ್ನೂ ವಿರಾಮ ತೆಗೆದುಕೊಂಡಿದ್ದ ಬಗ್ಗೆ ಮಾತನಾಡಿರುವ ವಿರಾಟ್ , ಯಾವುದೇ ಆಟಗಾರನಿಗೆ ಬಯೋ ಬಬಲ್ನಿಂದ ವಿರಾಮ ತೆಗೆದುಕೊಳ್ಳುವುದು ಬಹಳ ಮುಖ್ಯ. ನಿರಂತರವಾಗಿ ಆಡುವುದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಕೆಲಸದ ಹೊರೆ ನಿರ್ವಹಣೆ ಬಹಳ ಮುಖ್ಯ ಮತ್ತು ಆಟಗಾರರಿಗೆ ಮಾನಸಿಕ ಸ್ಥಳಾವಕಾಶವೂ ಬೇಕಾಗುತ್ತದೆ ಎಂದರು..
ಅಲ್ಲದೇ ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡಿದ್ದರ ಬಗ್ಗೆ ಮಾತನಾಡಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು ತಂಡವು ಎಲ್ಲಾ ಪ್ರಯತ್ನಗಳನ್ನು ಮಾಡಿದೆ, ಆದರೆ ಕೊನೆಯಲ್ಲಿ ಫಲಿತಾಂಶವು ನಮ್ಮ ಪರವಾಗಿ ಬರಲಿಲ್ಲ. ಅಜಿಂಕ್ಯಾ ಯಾವಾಗಲೂ ಹೊಸ ಆಲೋಚನೆಗಳೊಂದಿಗೆ ಬರುತ್ತಾರೆ, ಆದರೆ ಇಲ್ಲಿ ಎದುರಾಳಿ ತಂಡಕ್ಕೂ ನೀವು ಮನ್ನಣೆ ನೀಡಬೇಕು ಏಕೆಂದರೆ ಅವರು ಅತ್ಯುತ್ತಮ ಕ್ರಿಕೆಟ್ ಆಡಿದ್ದಾರೆ. ಕೊನೆಯ 10 ಓವರ್ಗಳಲ್ಲಿ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು ಎಂದಿದ್ದಾರೆ..