ತವರಿನಿಂದ ಹಣ ತರಲಿಲ್ಲ ಎಂದು ಹೆಂಡತಿಯನ್ನ ಕೊಂದ ಗಂಡ
ಮಾವನ ನಿವೃತ್ತಿ ಹಣ ತರಲಿಲ್ಲ ಎಂದು ಪತ್ನಿ ಕುತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ರಾಯಚೂರು ನಗರದ ಅಂದ್ರೂನ್ ಕಿಲ್ಲಾದಲ್ಲಿ ಜರುಗಿದೆ. 34 ವರ್ಷದ ಆಸ್ಮಾ ಬಾನು ಕೊಲೆಯಾದ ಮೃತ ದುರ್ಧೈವಿ. ಆರೋಪಿ ಪತಿ ಮೊಹಮ್ಮದ್ ಫಜಲುದ್ದೀನ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಚಹಾಪುಡಿ ವ್ಯಾಪಾರ ಮಾಡುತ್ತಿದ್ದ ಫಜಲುದ್ದೀನ್ ಕಳೆದ 8 ವರ್ಷದ ಹಿಂದೆ ಆಸ್ಮಾ ಬಾನು ಜೊತೆ ವಿವಾಹವಾಗಿದ್ದನು,ಮದುವೆಯಾದಾಗಿನಿಂದ ಹಣಕ್ಕಾಗಿ ಪತಿ, ಪತ್ನಿ ಆಸ್ಮಾಗೆ ಕಿರುಕುಳ ನೀಡುತ್ತಿದ್ದ. ಮೃತ ಆಸ್ಮಾ ತಂದೆ ಹುಚ್ಚಪೀರ್ ಸಾಬ್ ಕೆಎಸ್ಆರ್ಟಿಸಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿ ಹಣದಲ್ಲಿ ಪಾಲು ಬೇಕು ಅಂತ ಪೀಡಿಸುತ್ತಿದ್ದ ಪತಿ ಫಜಲುದ್ದೀನ್ ಪೀಡಿಸುತ್ತಿದ್ದನಂತೆ.
ಫಜಲುದ್ದೀನ್ ಜೊತೆ ಆತನ ಸಹೋದರಿಯರು ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.