ಕಾಂಗ್ರೇಸ್ ತೊರೆದು ತೃಣಮೂಲ ಕಾಂಗ್ರೇಸ್ ಸೇರಿದ ಮೆಘಾಲಯ ಶಾಸಕರು
ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೇಸ್ ತನ್ನ ಹಿಡಿತವನ್ನ ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ 12 ಶಾಸಕರು ಕಂಗ್ರೇಸ್ ಪಕ್ಷವನ್ನ ತೊರೆದು ಮಮತ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೇಸ್ ಪಕ್ಷಾಂತರವಾಗುವ ಮೂಲಕ ಕಾಂಗ್ರೇಸ್ ಗೆ ಬಿಗ್ ಶಾಕ್ ನೀಡಿದ್ದಾರೆ.
ಮೇಘಾಲಯದ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ವಿನ್ಸೆಂಟ್ ಎಚ್.ಪಾಲಾ ಮತ್ತು ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನಡುವೆ ಪರಸ್ಪರ ಹೊಂದಾಣಿಕೆಯ ಕೊರತೆ ಇತ್ತು. ಇದನ್ನ ಪರಿಹರಿಸಲು ರಾಹುಲ್ ಗಾಂಧಿ ಬೇಟಿ ನೀಡಿ ಇಬ್ಬರ ಜೊತೆ ಮಾತುಕತೆ ಸಹ ನಡೆಸಿದ್ದರು. ಮಾತುಕತೆ ಫಲಪ್ರದವಾಗದೆ ಮುಕ್ಮಲ್ ಮಸಿಂಗ್ ಬಣಕ್ಕೆ ಸೇರಿದ ಶಾಸಕರ ಹಸ್ತಕ್ಕೆ ಕೈ ಕೊಟ್ಟು ಟಿ ಎಂಸಿ ಪಕ್ಷದ ಕೈ ಹಿಡಿದಿದ್ದಾರೆ.
ಮಮತ ದೀದಿಯವರ ಟಿ ಎಂ ಸಿ ಪಕ್ಷ ರಾಷ್ಟ್ರ ಮಟ್ಟದಲ್ಲಿ ತನ್ನ ಬೇರುಗಳನ್ನ ವಿಸ್ತರಿಸಿಕೊಳ್ಳುತ್ತಿದೆ. 2023ರಲ್ಲಿ ಮೇಘಾಲಯದಲ್ಲಿ ಚುನಾವಣೆ ನಡೆಯಲಿದ್ದು ಅಲ್ಲಿ ಪಕ್ಷ ಸಂಘಟನೆ ಬಲಪಡಿಸುವ ದೃಷ್ಟಿಯಿಂದ ಚುನಾವಣಾ ಚತುರ ಪ್ರಶಾಂತ್ ಕಿಶೋರ್ ತಂಡ ಅಲ್ಲಿಯೇ ಇದೆ.