ದಿನಗೂಲಿ ಕಾರ್ಮಿಕರೊಬ್ಬರ ಖಾತೆಯಲ್ಲಿ 200 ಕೋಟಿ ರೂ. ಇದ್ದು, ಆದಾಯ ತೆರಿಗೆ ನೊಟೀಸ್ ನೀಡಿದೆ.
ಉತ್ತರ ಪ್ರದೇಶದ ದಿನಗೂಲಿ ಕಾರ್ಮಿಕರೊಬ್ಬರ ಬ್ಯಾಂಕ್ ಖಾತೆಯಲ್ಲಿಯೇ ಇಷ್ಟೊಂದು ಹಣ ಇದೆ. ಬಸ್ತಿ ಜಿಲ್ಲೆಯ ಬಟಾನಿಯಾ ಗ್ರಾಮದ ನಿವಾಸಿ ಶಿವಪ್ರಸಾದ್ ಎಂಬುವವರ ಖಾತೆಯಲ್ಲಿಯೇ ಈ ರೀತಿಯ ಹಣವಿದೆ.
ಈ ವ್ಯಕ್ತಿ ದಿನಗೂಲಿ ಕೆಲಸ ಮಾಡುತ್ತಿದ್ದರು. ಆದರೆ, ಇವರ ಖಾತೆಗೆ ಇತ್ತೀಚೆಗೆ ಸಾಕಷ್ಟು ದೊಡ್ಡ ಮಟ್ಟದ ಹಣ ಜಮಾ ಆಗಿದೆ. ಇದು ಎಲ್ಲರಿಗೂ ಆಶ್ಚರ್ಯ ಮೂಡಿಸುವಂತೆ ಮಾಡಿದೆ. ಈ ಹಣದಲ್ಲಿ ಆದಾಯ ತೆರಿಗೆ ಅಡಿಯಲ್ಲಿ ರೂ. 4.58 ಲಕ್ಷ ಕಡಿತಗೊಳಿಸಲಾಗಿದೆ ಎನ್ನಲಾಗಿದೆ.
2019 ರಲ್ಲಿ ತನ್ನ ಪ್ಯಾನ್ ಕಾರ್ಡ್ (Pan Card) ಕಳೆದುಕೊಂಡಿರುವುದಾಗಿ ಆತ ಹೇಳಿದ್ದ. ಈ ಕಾರ್ಡ್ ಸಹಾಯದಿಂದ ಯಾರೋ ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆ ತೆರೆದು ಅಕ್ರಮ ವಹಿವಾಟು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದೇವೆ ಎಂದು ಕೂಡ ಅವರು ಹೇಳಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಕೂಡ ದಾಖಲೆ ಪರಿಶೀಲನೆ ನಡೆಸುತ್ತಿದೆ.