ಅಣಕು ಡ್ರಿಲ್ ನಿಂದ ಆಮ್ಲಜನಕ ಪೂರೈಕೆ ಕಡಿತಗೊಳಿಸಿ 22 ರೋಗಿಗಳ ಸಾವಿಗೆ ಕಾರಣವಾದ ಖಾಸಗಿ ಆಸ್ಪತ್ರೆ ವಿರುದ್ಧ ತನಿಖೆಗೆ ಆದೇಶ
ಅಣಕು ಡ್ರಿಲ್ ನಿಂದ ಆಮ್ಲಜನಕ ಪೂರೈಕೆ ಕಡಿತಗೊಳಿಸಿ 22 ರೋಗಿಗಳ ಸಾವಿಗೆ ಕಾರಣವಾದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವಿರುದ್ಧ ತನಿಖೆ ಕೈಗೊಳ್ಳುವುದಾಗಿ ಉತ್ತರಪ್ರದೇಶ ಸರಕಾರ ಮಂಗಳವಾರ ತಿಳಿಸಿದೆ.
ಏಪ್ರಿಲ್ 26 ರಂದು ರೋಗಿಗಳ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸಿದ್ದಾಗಿ ಹೇಳಿಕೊಂಡ ಖಾಸಗಿ ಆಸ್ಪತ್ರೆಯೊಂದರ ವಿಡಿಯೋ ಹೊರಬಿದ್ದ ನಂತರ ಆಗ್ರಾದ ಜಿಲ್ಲಾ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿಗಳು ತಿಳಿಸಿದೆ.
ಟ್ವೀಟ್ ಮಾಡಿರುವ ವೀಡಿಯೊ ಒಂದರಲ್ಲಿ, ಪ್ಯಾರಾಸ್ ಆಸ್ಪತ್ರೆಯ ಮಾಲೀಕ ಡಾ.ಅರಿಂಜಯ್ ಜೈನ್ ಅಣಕು ಡ್ರಿಲ್ ನ ಭಾಗವಾಗಿ ಐದು ನಿಮಿಷಗಳ ಕಾಲ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸಲಾಗಿದೆ ಎಂದು ಕೆಲವು ಜನರಿಗೆ ಹೇಳುತ್ತಿದ್ದಾರೆ. ಇದರಿಂದಾಗಿ ಆ ದಿನ ಇಪ್ಪತ್ತೆರಡು ಜನರು ಮೃತಪಟ್ಟಿದ್ದರು ಎಂದು ವರದಿಗಳು ತಿಳಿಸಿದೆ.
ವೀಡಿಯೊದಲ್ಲಿ ಗೋಚರಿಸದ ಡಾ.ಜೈನ್, ಆ ದಿನ ತೀವ್ರ ಆಮ್ಲಜನಕದ ಕೊರತೆ ಇತ್ತು ಮತ್ತು ಆಸ್ಪತ್ರೆ ಆಡಳಿತವು ರೋಗಿಗಳನ್ನು ಡಿಸ್ಚಾರ್ಜ್ ಮಾಡಲು ಜನರನ್ನು ಕೇಳಿಕೊಂಡಿದೆ. ಆದರೆ ಯಾರೂ ಸಿದ್ಧರಿರಲಿಲ್ಲ.ನಂತರ ನಾನು ಒಂದು ರೀತಿಯ ಅಣಕು ಡ್ರಿಲ್ ಪ್ರಯತ್ನಿಸಲು ನಿರ್ಧರಿಸಿದೆ. ಯಾರ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸಬಹುದೆಂದು ತಿಳಿಸಲು ಸಿಬ್ಬಂದಿಯನ್ನು ಕೇಳಿದೆ. ಬೆಳಿಗ್ಗೆ 7 ಗಂಟೆಗೆ ಅಣಕು ಡ್ರಿಲ್ ಸಂಭವಿಸಿದೆ. ಈ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ಡಾ.ಜೈನ್ ಟ್ವೀಟ್ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.
ಇಪ್ಪತ್ತೆರಡು ರೋಗಿಗಳು ಉಸಿರಾಟಕ್ಕಾಗಿ ಹೋರಾಟ ಪ್ರಾರಂಭಿಸಿದರು ಮತ್ತು ಅವರ ದೇಹಗಳು ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದವು. ಅವರು ಬದುಕುಳಿಯುವುದಿಲ್ಲ ಎಂದು ನಮಗೆ ತಿಳಿದಿತ್ತು. ಐಸಿಯು ವಾರ್ಡ್ನಲ್ಲಿ ಬದುಕುಳಿದ ಎಪ್ಪತ್ತನಾಲ್ಕು ಇತರರಿಗೆ ತಮ್ಮದೇ ಆದ ಆಮ್ಲಜನಕ ಸಿಲಿಂಡರ್ಗಳನ್ನು ತರಲು ತಿಳಿಸಲಾಯಿತು ಎಂದು ಅವರು ಆ ವೀಡಿಯೊದಲ್ಲಿ ಹೇಳಿದ್ದಾರೆ.
ಆದರೆ ಆ ಬಳಿಕ ಈ ಕುರಿತು ಆಡಿಯೋವನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಣಕು ಕಾರ್ಯಾಚರಣೆವೆಂದರೆ ಆಕ್ಸಿಜನ್ ಪೂರೈಕೆ ಕಡಿತಗೊಳಿಸುವುದಲ್ಲ. ನಾವು ಆಕ್ಸಿಜನ್ ಪೂರೈಕೆ ಕಡಿತಗೊಳಿಸಿಲ್ಲ ಎಂದು ಆಸ್ಪತ್ರೆ ಮಾಲಕ ಜೈನ್ ಹೇಳಿದ್ದಾರೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮನೆಮದ್ದುಗಳು#Saakshatv #healthtips #homeremedies #improveimmunity https://t.co/Wl5YTeOQAB
— Saaksha TV (@SaakshaTv) June 5, 2021
ಎಗ್ ಕಬಾಬ್ https://t.co/ew7PxrTVda
— Saaksha TV (@SaakshaTv) June 6, 2021
ಮೊಸರಿಗೆ ಏನನ್ನು ಬೆರೆಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು? – ಇಲ್ಲಿದೆ ಡಯೆಟಿಷಿಯನ್ ಸಲಹೆ#Saakshatv #healthtips #immunity https://t.co/rUUIj2atbJ
— Saaksha TV (@SaakshaTv) June 6, 2021
ರಂಬೂಟನ್ ಹಣ್ಣಿನ ಕೃಷಿ ಅಡಿಕೆ, ರಬ್ಬರ್ ಗಿಂತ ಹೆಚ್ಚು ಲಾಭದಾಯಕ#Rambutanfruit https://t.co/KM23CLP2TS
— Saaksha TV (@SaakshaTv) June 6, 2021
#oxygensupply #mockdrill #probe