ಸೆಪ್ಟಿಕ್ ಟ್ಯಾಂಕ್ ಅಗೆಯುವಾಗ ಮಣ್ಣು ಕುಸಿದು ಐವರು ಸಾವು
ಆಗ್ರಾ: ಸೆಪ್ಟಿಕ್ ಟ್ಯಾಂಕ್ ಅಗೆಯುವಾಗ ಮಣ್ಣು ಕುಸಿದು ಐವರು ಮೃತಪಟ್ಟಿರುವ ಘಟನೆ ಆಗ್ರಾ ಜಿಲ್ಲೆಯ ಪ್ರತಾಪ್ ಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಹರಿಮೋಹನ್ (17), ಅನುರಾಗ್ (14), ಅವಿನಾಶ್ (16),ಸೋನು ಶರ್ಮಾ (32) ಯೋಗೇಶ್ ಬಾಗೆಲ್ (20) ಎಂದು ಗುರುತಿಸಲಾಗಿದೆ. ಇದರಲ್ಲಿ ನಾಲ್ವರು ಒಂದೇ ಕುಟುಂಬದವರಾಗಿದ್ದಾರೆ.
ನಾಲ್ವರು ಸೆಪ್ಟಿಕ್ ಟ್ಯಾಂಕ್ ಅಗೆಯುವಾಗ ಮಣ್ಣು ಕುಸಿದಿದ್ದು, ಅವರನ್ನ ರಕ್ಷಿಸಲು ಸ್ಥಳೀಯರೊಬ್ಬರು ಟ್ಯಾಂಕ್ ನೊಳಗೆ ಇಳಿದಿದ್ದಾರೆ.
ಈ ವೇಳೆ ಓರ್ವ ಮೃತಪಟ್ಟಿದ್ದು, ಇನ್ನುಳಿದ ನಾಲ್ವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರೂ ಮೃತಪಟ್ಟಿದ್ದಾರೆ.
ಇನ್ನು ಈ ಘಟನೆಗೆ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.