ಜನರ ಬೆಂಬಲವಿಲ್ಲ `ಸಿದ್ದರಾಮಯ್ಯ ನೀವು ಸಲ್ಲುವ ಜಾಗ ಯಾವುದು’..?
ಬೆಂಗಳೂರು : ಮಾನ್ಯ ಸಿದ್ದರಾಮಯ್ಯನವರೇ, ಜನರ ಬೆಂಬಲವಿಲ್ಲ, ಪಕ್ಷದ ಸಹಕಾರವಿಲ್ಲ, ನೀವು ಸಲ್ಲುವ ಜಾಗ ಯಾವುದು ಎಂದು ಬಿಜೆಪಿ ಪ್ರಶ್ನಿಸಿದೆ. Karnataka bjp twitter war against siddaramaiah
ಕಾಂಗ್ರೆಸ್ ಎಂಎಲ್ ಸಿ ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆಯಲು ಮುಂದಾಗಿರುವ ಬಗ್ಗೆ ಬಿಜೆಪಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾಲೆಳೆದಿದೆ.
ಬಿಜೆಪಿ ಟ್ವೀಟ್ ನಲ್ಲಿ..
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಆದರೆ ಸಂವಿಧಾನ ತಜ್ಞ ಸಿದ್ದರಾಮಯ್ಯ ಅವರು ಮಾತ್ರ ಮೌನವಾಗಿದ್ದಾರೆ. ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಕುಟುಕಿದೆ.
ಮಾನ್ಯ ಸಿದ್ದರಾಮಯ್ಯನವರೇ, ವರುಣಾ ಕ್ಷೇತ್ರವನ್ನು ಪುತ್ರವ್ಯಾಮೋಹಕ್ಕಾಗಿ ಬಳಸಿಕೊಂಡಿರಿ. ಚಾಮುಂಡೇಶ್ವರಿಯಲ್ಲಿ ಜನರು ಕೈ ಹಿಡಿಯಲಿಲ್ಲ. ಬಾದಾಮಿಯಲ್ಲಿ ಬೀಳ್ಕೊಡಲು ಜನ ಸಜ್ಜಾಗಿದ್ದಾರೆ. ಹುಣಸೂರು, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಮುಂದೆ ಯಾವುದು? ಜನರ ಬೆಂಬಲವಿಲ್ಲ, ಪಕ್ಷದ ಸಹಕಾರವಿಲ್ಲ, ನೀವು ಸಲ್ಲುವ ಜಾಗ ಯಾವುದು ಎಂದು ಸಿದ್ದರಾಮಯ್ಯ ಕಾಲೆಳೆದಿದೆ.