BJP | ನೆಲೆ ಕಚ್ಚಿರುವ ಕಾಂಗ್ರೆಸ್ಸಿಗೆ ಈಗ ಹಿಂದುತ್ವದ ನೆನಪಾಗಿದೆ
ಬೆಂಗಳೂರು : ಹಿಂದೂ ವಿರೋಧಿ ನೀತಿಯಿಂದ ದೇಶದೆಲ್ಲೆಡೆ ನೆಲೆ ಕಚ್ಚಿರುವ ಕಾಂಗ್ರೆಸ್ಸಿಗೆ ಈಗ ಹಿಂದುತ್ವದ ನೆನಪಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ಇತ್ತೀಚೆಗೆ ಕಾಂಗ್ರೆಸ್ “ಮೃದು ಹಿಂದುತ್ವ” ತಂತ್ರ ಅಳವಡಿಸಿಕೊಂಡಿದೆ ಎಂಬುದು ಚರ್ಚೆಯಾಗುತ್ತಿದೆ. ಹಿಂದೂ ವಿರೋಧಿ ನೀತಿಯಿಂದ ದೇಶದೆಲ್ಲೆಡೆ ನೆಲೆ ಕಚ್ಚಿರುವ ಕಾಂಗ್ರೆಸ್ಸಿಗೆ ಈಗ ಹಿಂದುತ್ವದ ನೆನಪಾಗಿದೆ. ರಾಹುಲ್ ಗಾಂಧಿ ಅವರಂತೆ ಡಿಕೆಶಿ, ಸಿದ್ದರಾಮಯ್ಯ ಚುನಾವಣಾ ಹಿಂದೂಗಳಾಗಿ ಮಾರ್ಪಾಡಾಗುತ್ತಿದ್ದಾರೆ.
ಮಾನ್ಯ ಡಿಕೆಶಿ ಅವರೇ “ಮೃದು ಹಿಂದುತ್ವ” ಎಂದರೇನು? ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆಯ ಬಿಜೆಪಿ ನಿರ್ಧಾರಕ್ಕೆ ಬೆಳಗ್ಗೆ ವಿರೋಧಿಸುವುದು. ಸಂಜೆಯಾಗುತ್ತಲೇ, ಹಿಂದೂಗಳ ಮತ ಕಳೆದುಕೊಳ್ಳುತ್ತೇವೆ ಎಂಬ ಭಯದಲ್ಲಿ “ಯದಾ ಯದಾ ಹೀ ಧರ್ಮಸ್ಯ” ಮಂತ್ರ ಪಠಿಸುವುದು. ಇದು ಮೃದು ಹಿಂದುತ್ವವೇ?
ಗೋಹತ್ಯೆಯ ಸಮರ್ಥನೆ ಮಾಡುವುದು ಮೃದು ಹಿಂದುತ್ವವೇ? ಗೋಕಳ್ಳತನವನ್ನು ಸಮರ್ಥನೆ ಮಾಡುವುದು ಮೃದು ಹಿಂದುತ್ವವೇ? ಗೋಕಳ್ಳನಿಗೆ ಪರಿಹಾರ ನೀಡುವುದು ಮೃದು ಹಿಂದುತ್ವವೇ? ಗೋ ಹತ್ಯೆ ನಿಷೇಧ ಕಾನೂನನ್ನು ವಿರೋಧಿಸುವುದು ಮೃದು ಹಿಂದುತ್ವವೇ ಎಂದು ಬಿಜೆಪಿ ಪ್ರಶ್ನಿಸಿದೆ. Karnataka bjp-congress hindutva