KOLAR | ಜೀತಕ್ಕಿದ್ದ ಕಾರ್ಮಿಕರ ರಕ್ಷಣೆ
ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೋಣಿಮಡಗು ಗ್ರಾಮದಲ್ಲಿ ಇಟ್ಟಿಗೆ ಕಾರ್ಖಾನೆಯಲ್ಲಿ ಜೀತಕ್ಕೆ ಇದ್ದ ಐದು ಜನ ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ.
ದೋಣಿಮಡಗು ಗ್ರಾಮದ ಕೃಷ್ಣಮೂರ್ತಿ ಎಂಬುವರ ಇಟ್ಟಗೆ ಕಾರ್ಖಾನೆಯಲ್ಲಿ ಓಡಿಸ್ಸಾ ಹಾಗೂ ಆಂದ್ರ ಮೂಲದ ಐದು ಜನ ಕಾರ್ಮಿಕರು ಜೀತಕ್ಕೆ ಇದ್ದರು.
ಇದರ ಮಾಹಿತಿ ತಿಳಿದ ಸಹಾಯಕ ಕಮಿಷನರ್ ಆನಂದ್ ಪ್ರಕಾಶ್, ಮೀನಾ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಅಲ್ಲದೇ ಕಾರ್ಮಿಕರನ್ನು ರಕ್ಷಣೆ ಮಾಡಿ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ನೀಡಿದ್ದಾರೆ.
ಇನ್ನು ಈ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.