ಕಷ್ಟದಲ್ಲಿರುವವರಿಗೆ ಸದ್ದಿಲ್ಲದೇ ನೆರವಾಗುವ ಕಿಚ್ಚ ಸುದೀಪ್, ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಭರವಸೆ ಕಳೆದುಕೊಂಡವರ ಬಾಳಿಗೆ ದೀಪವಾಗಿದ್ದಾರೆ.
ಅದರಂತೆ ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಿರ್ದೇಶಕ ಎ.ಟಿ.ರಘು ಅವರ ಸಹಾಯಕ್ಕೆ ಚಂದನವನದ ಮಾಣಿಕ್ಯ ಧಾವಿಸಿದ್ದಾರೆ.
ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೆ ಈಡಾಗಿರುವ ಎ.ಟಿ.ರಘು ಅವರು ಈಗ ಆರ್ಥಿಕವಾಗಿ ದುರ್ಬಲವಾಗಿದ್ದಾರೆ. ಅವರಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗುತ್ತದೆ.
ಸದ್ಯ ಅವರು ಎದ್ದು ಓಡಾಡುವುದೂ ಕಷ್ಟವಾಗಿದೆ. ಈ ವಿಚಾರವನ್ನ ತಿಳಿದ ಕಿಚ್ಚ ಸುದೀಪ್ ಎ.ಟಿ.ರಘು ಅವರಿಗೆ ಫೋನ್ ಮಾಡಿ ನಿಮ್ಮ ಸಹಾಯಕ್ಕೆ ನಾನಿದ್ದೇನೆ ಎಂದು ಭರವಸೆ ನೀಡಿದ್ದಾರೆ.
ಸುದೀಪ್ ಮಾತುಗಳಿಂದ ಭಾವುಕರಾದ ರಘು ಅವರು ಅಂಬರೀಷ್ ಹೋದ ಮೇಲೆ ನನಗೆ ಸಹಾಯ ಮಾಡುವವರೇ ಇರಲಿಲ್ಲ. ಈಗ ನಿಮ್ಮಲ್ಲಿ ಅವರನ್ನು ಕಾಣುತ್ತೇನೆ ಎಂದಿದ್ದಾರೆ.
ಅಂದಹಾಗೆ ರಘು ಅವರು ಅಜಯ ವಿಜಯ,ಮಂಡ್ಯದ ಗಂಡು,ಆಶಾ,ಅವಳ ನೆರಳು,ಗೊಂಡಾಗುರು,ಅಂತಿಮ ತೀರ್ಪು,ಮೈಸೂರು ಜಾಣ,ಮಿಡಿದ ಹೃದಯಗಳು ಹೀಗೆ 20 ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ.
ಹಿಂದಿಯಲ್ಲಿ ರಜನಿಕಾಂತ್ ನಾಯಕತ್ವದ ಮೇರಿ ಅದಾಲತ್,ಮಲಯಾಳಂ ನಲ್ಲಿ ಕಟ್ಟು ರಾಣಿ ಸೇರಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ ಎ.ಟಿ ರಘು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel