`ಸ್ವಾಭಿಮಾನ’ದಿಂದ `ಕೈ’ ಹಿಡಿದ `ಸ್ವಾಭಿಮಾನಿ’ : ಕಾಂಗ್ರೆಸ್ ಕೋಟೆ ಮತ್ತಷ್ಟು `ಭದ್ರ’
ಬೆಂಗಳೂರು : `ಸ್ವಾಭಿಮಾನ’ದಿಂದ `ಕೈ’ ಹಿಡಿದ `ಸ್ವಾಭಿಮಾನಿ’.. ಕಾಂಗ್ರೆಸ್ ಕೋಟೆ ಮತ್ತಷ್ಟು `ಭದ್ರ’.. ಶರತ್ ಬಚ್ಚೇಗೌಡ ಕೈ ಪಡಿಸಲಿದೆ ಕಾಂಗ್ರೆಸ್…
ಹೌದು..! 2019ರಲ್ಲಿ ನಡೆದ ಹೊಸಕೋಟೆ ಉಪಚುನಾವಣೆ ಇಡೀ ರಾಜ್ಯದಲ್ಲಿ ಭಾರಿ ಕುತೂಹಲ ಕೆರಳಿಸಿತ್ತು. ಪಕ್ಷಕ್ಕಾಗಿ ದುಡಿದ ಯುವ ನಾಯಕನನ್ನು ಅಂದು ರಾಜ್ಯ ಬಿಜೆಪಿ ಕಡೆಗಣಿಸಿತ್ತು.
ಅಧಿಕಾರ ಹಿಡಿಯುವ ಒಂದೇ ಉದ್ದೇಶದಿಂದ ನಿಷ್ಠಾವಂತ ಕಾರ್ಯಕರ್ತರಾಗಿ ಶರತ್ ಬಚ್ಚೇಗೌಡರನ್ನ ಕಡೆಗಣಿಸಿತ್ತು.
ಇದರಿಂದ ಬೇಸರಗೊಂಡು ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ವಿಜಯದ ಪತಾಕೆ ಹಾಕಿದ ಶರತ್ ಬಚ್ಚೇಗೌಡ, ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾದರು.
ಶರತ್ ಬಚ್ಚೇಗೌಡ ಅವರು ಪಕ್ಷೇತರ ಶಾಸಕರಾಗಿರುವುದರಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ಘೋಷಿಸಿದ್ದಾರೆ.
ಶರತ್ ಹಿಂದೆ ಇದೆ ಯುವ ಪಡೆ
ಇಂದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವ ಶರತ್ ಬಚ್ಚೇಗೌಡ ಅವರ ಹಿಂದೆ ಯುವಜನತೆಯ ಪಡೆಯೇ ಇದೆ. ಹೊಸಕೋಟೆಯಾದ್ಯಂತ ಶರತ್ ಬೆಂಬಲಗರ ಸಂಖ್ಯೆ ಹೆಚ್ಚಾಗಿಯೇ ಇದೆ. ಇದಲ್ಲದೆ ಶರತ್ ಬಚ್ಚೇಗೌಡ ಅವರು ಒಳ್ಳೆಯ ವಾಗ್ಮಿ ಆಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಲಾಭದಾಯಕ.