ಆಳ್ವಾಸ್ ಅಂಗಳದಲ್ಲಿ ಪ್ರಜ್ವಲಿಸಿದ ಪ್ರತಿಭೆ ಈಗ ಕೆಕೆಆರ್ ಟೀಂನ ನೆಟ್ ಬೌಲರ್
ಇಂಡಿಯನ್ ಪ್ರಿಮಿಯರ್ ಲೀಗ್ ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ನೆಟ್ ಬೌಲರ್ ಆಗಿ ಗಿಳಿಯಾರು ಬಡಾಮನೆ ಅಭಿಲಾಷ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಇವರು ಆಳ್ವಾಸ್ ಅಂಗಳದಲ್ಲಿ ಮಿಂಚಿದ್ದ ಪ್ರತಿಭೆಯಾಗಿದ್ದು, ನಂತರ ಕರ್ನಾಟಕ ರಾಜ್ಯ ಅಂಡರ್ 19 ತಂಡದಲ್ಲಿ, ಅಂಡರ್ 23 ರ ವಯೋಮಾನದ ಒಳಗಿನ ತಂಡದಲ್ಲಿ ಸ್ಥಾನ ಪಡೆದಿದ್ದರು.
ಅಭಿಲಾಷ್ ಶೆಟ್ಟಿಯ ಪ್ರತಿಭೆಯನ್ನ ಗುರುತಿಸಿ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಶಿವಮೊಗ್ಗ ಲಯನ್ಸ್, ಹುಬ್ಬಳ್ಳಿ ಟೈಗರ್ಸ್ ತಂಡಗಳು ಖರೀದಿ ಮಾಡಿದ್ದವು.
ಕೆಪಿಎಲ್ ಮಿಂಚು ಹರಿಸಿ ರಾಜ್ಯಮಟ್ಟದ ಹತ್ತು ಹಲವಾರು ತಂಡಗಳನ್ನು ಪ್ರತಿನಿಧಿಸಿ ಪದಕಗಳ ಗೊಂಚಲನ್ನೇ ಬಾಚಿರುವ ಗಿಳಿಯಾರು ಬಡಾಮನೆ ಅಭಿಲಾಷ್ ಶೆಟ್ಟಿ ಇದೀಗ ಪ್ರತಿಷ್ಠಿತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ನೆಟ್ ಬೌಲರ್ ಆಗಿ ಆಯ್ಕೆಗೊಂಡಿದ್ದಾರೆ.