ಬಿಜೆಪಿ ಪ್ರಕಟಣೆ ಸುಳ್ಳಾ..? ಏನಿದು ವಿವಾದ..?
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೀಡಿರುವ ಪ್ರಕಟನೆ ಭಾರಿ ಚರ್ಚೆ ನಾಂದಿ ಹಾಡಿದೆ. ಅವಾಸ್ ಯೋಜನೆ ಅಡಿಯಲ್ಲಿ ಜನರು ಭಾರಿ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಮನೆಯ ಮುಂದೆ ನಿಂತಿರುವ ಫೋಟೋವನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಈ ಪ್ರಕಟನೆಯನ್ನ ಪ್ರಮುಖ ನಿಯತಕಾಲಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಈ ಪ್ರಕಟನೆಯು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಅಂದಹಾಗೆ ಬಿಜೆಪಿ ಬಿಡುಗಡೆಗೊಳಿಸಿರುವ ಪ್ರಕಟನೆಯ ಫೋಟೋದಲ್ಲಿ ಇರುವ ಮಹಿಳೆಯ ಹೆಸರು ಲಕ್ಷ್ಮೀ ದೇವಿ. ಪಶ್ಚಿಮ ಬಂಗಾಳದ ರಾಜಧಾನಿಯಾದ ಕೋಲ್ಕತ್ತಾದ ಬೌಬಜಾರ್ನಲ್ಲಿರುವ ಮಲಂಗಾದಲ್ಲಿ ವಾಸಿಸುತ್ತಿದ್ದಾರೆ. “ಲಕ್ಷ್ಮೀದೇವಿ ಅವರಿಗೆ ಆತ್ಮನಿರ್ಭರ್ ಭಾರತ್ ಭಾಗವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಭಾಗವಾಗಿ ಮನೆಗೆ ಸಿಕ್ಕಿದೆ ಎಂದು ಬಿಜೆಪಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಆದರೇ ಈ ಪ್ರಕಟನೆಯನ್ನ ನೋಡಿದ ಲಕ್ಷ್ಮಿದೇವಿ ಅವರಿಗೆ ಸ್ವತಃ ಗಾಬರಿಯಾಗಿದ್ದು, ಆ ಫೋಟೋ ಯಾರು ಹೇಗೆ ತೆಗೆದಿದ್ದಾರೋ ತಿಳಿದಿಲ್ಲವೆಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಇನ್ನ ಲಕ್ಷ್ಮೀದೇವಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅದು ಕೂಡು ಒಟ್ಟು ಆರು ಕುಟುಂಬ ಸದಸ್ಯರು ಒಂದೇ ಕೋಣೆ ಇರುವ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆ ಮನೆಯಲ್ಲಿ ಶೌಚಾಲಯ ಸೌಲಭ್ಯವೂ ಇಲ್ಲ. ಈ ಮನೆಗೆ ಅವರು ತಿಂಗಳಿಗೆ 500 ರೂ. ಬಾಡಿಗೆ ಕಟ್ಟುತ್ತಿದ್ದಾರೆ.
ಇದು ಒಂದು ಕಡೆಯಾದ್ರೆ ಬಿಜೆಪಿಯ ಈ ಪ್ರಕಟನೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ನೆಟ್ಟಿಜನರು ಬಿಜೆಪಿ ವಿರುದ್ಧ ಭಿನ್ನ ವಿಭಿನ್ನ ಮಿಮ್ ಗಳ ಮೂಲಕ ಕಿಡಿಕಾರುತ್ತಿದ್ದಾರೆ.