ವಾಮಾಚಾರಕ್ಕಾಗಿ ಸ್ನೇಹಿತನನ್ನೇ ಕೆರೆಗೆ ತಳ್ಳಿ ಕೊಲೆ…..??
16 ವರ್ಷದ ಬಾಲಕನ್ನ ಸ್ನೇಹಿತರೇ ಸೇರಿಕೊಂಡು ವಾಮಾಚಾರಕ್ಕೆ ಬಲಿ ಕೊಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೋಕಿನ ಹಳೇಪುರದಲ್ಲಿ ನಡೆದಿದೆ. ಮಹೇಶ್ ಅಲಿಯಾಸ್ ಮನು ಮೃತ ದುರ್ದೈವಿ.
ಧನುರ್ ಅಮವಾಸೆಯ ಹಿನ್ನಲೆಯಲ್ಲಿ ಮೂವರು ಸ್ನೇಹಿತರು ಈ ಬಾಲಕನ್ನ ಕೆರೆಯ ಬಳಿ ಕರೆದುಕೊಂಡು ಹೋಗಿದ್ದಾರೆ. ಅದರಲ್ಲಿ ಒಬ್ಬ ಅಪ್ರಾಪ್ತ ಬಾಲಕ ತಾತನಿಂದ ಸ್ವಲ್ಪ ಮಟ್ಟಿನ ವಾಮಾಚಾರ ಕಲಿತಿದ್ದಾನೆ. ಕೆರೆಯ ಬಳಿ ಗೊಂಬೆ ತಯಾರಿಸಿ ಪೂಜೆ ಮಾಡಿ ಅದರ ಮೇಲೆ ಮೃತ ಬಾಲಕನ ಹೆಸರು ಬರೆದಿದ್ದಾರೆ. ನಂತರ ಆತನನ್ನ ಕೆರೆಗ ತಳ್ಳಿದ್ದಾರೆ ಎಂದು ಊರಿನ ಸ್ಥಳಿಯರು ಸಂಶಯ ಪಟ್ಟಿದ್ದಾರೆ. ಕೆರಯ ಬಳಿ ಬಾಲಕನ ಮೃತದೇಹ ಪತ್ತೆಯಾಗಿದ್ದು ಮೀನುಗಾರರ ಸಹಾಯದಿಂದ ಬಾಲಕನನ್ನ ಹೊರತೆಗೆಯಲಾಗಿದೆ.
ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರು ಬಾಲಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.