ಶಿಡ್ಲಘಟ್ಟ | ನಾಯಿಗಳ ದಾಳಿಗೆ ಸಿಲುಕಿ ಬಾಲಕ ಸಾವು shidlagatta saaksha tv
ಚಿಕ್ಕಬಳ್ಳಾಪುರ : ನಾಯಿಗಳ ದಾಳಿಗೆ ಸಿಲುಕಿ 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.
ನಗರದ ಸಂತೋಷ ಬಡಾವಣೆಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಖಲಂದರ್ ಖಾನ್ (10) ಎಂಬಾತ ಮೃತ ಬಾಲಕನಾಗಿದ್ದಾನೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಲಕ ಮನೆಯಿಂದ ಹೊರಗಡೆ ಬಂದಿದ್ದು, ಈ ವೇಳೆ 20 ಕ್ಕೂ ಅಧಿಕ ನಾಯಿಗಳು ದಾಳಿ ನಡೆಸಿವೆ.
ತಲೆ, ಮೈ, ಕೈ ಸೇರಿದಂತೆ ಎಲ್ಲೆಡೆ ನಾಯಿಗಳು ಕಚ್ಚಿ ಗಾಯಗೊಳಿಸಿದ್ದು, ಬಾಲಕನ ಪ್ರಾಣವಾಯು ನಿಂತು ಹೋಗಿದೆ.
ಬಳಿಕ ಸ್ಥಳೀಯರು ನಾಯಿಗಳನ್ನು ಓಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.