ಕಲಬುರಗಿ : ಕಲಬುರಗಿ ಹೊರವಲಯದ ಸೇಡಂ ರಸ್ತೆಯ ಕಾಳನೂರ ಡಾಬಾ ಬಳಿ ಚಾಕುವಿನಿಂದ ಇರಿದು ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಓಂನಗರ ಬಡಾವಣೆಯ ಗ್ಯಾರೇಜ್ವೊಂದರಲ್ಲಿ ಕೆಲಸ ಮಾಡ್ತಿದ್ದ ಫಿಲ್ಟರ್ಬೆಡ್ ನಿವಾಸಿ 21 ವರ್ಷದ ಆಕಾಶ್ ಎಂಬಾತನನ್ನ ಶ್ರೀನಿಧಿ ಎಂಬ ಯುವಕ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಅಂತಾ ಆರೋಪಿಸಲಾಗಿದೆ.
ಇನ್ನೂ ಸ್ಥಳಕ್ಕೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರಿನಿಧಿ ಎಂಬಾತನ ಸಹೋದರಿಯನ್ನ ನಮ್ಮ ತಮ್ಮ ಪ್ರೀತಿಸುತ್ತಿದ್ದ, ಈ ವಿಚಾರಕ್ಕೆ ಸಂಧಾನ ಕೂಡ ನಡೆದಿತ್ತು.
ಆದರೆ ನಿನ್ನೆ ಫೊನ್ ಮಾಡಿ ನಮ್ಮ ತಮ್ಮ ಆಕಾಶನನ್ನ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಅಂತಾ ಕಲಬುರಗಿ ಹೊರವಲಯದ ಕಾಳನೂರು ಡಾಬಾ ಬಳಿ ಕೊಲೆಯಾದ ಆಕಾಶ ಸಹೋದರ ಸಂಜಯ ಕುಮಾರ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊಲೆ ಆರೋಪಿ ಶ್ರೀನಿಧಿ ಮಾಲೀಕತ್ವದ ಸ್ಥಳದಲ್ಲೆ ನಮ್ಮ ತಮ್ಮ ಗ್ಯಾರೇಜ್ ಅಂಗಡಿ ಹಾಕಿ ಕೆಲಸ ಮಾಡುತ್ತಿದ್ದ, ಹೀಗಾಗಿ ನಿನ್ನೆ ಫೋನ್ ಮಾಡಿ ಕರೆದುಕೊಂಡು ಹೋಗಿ ಕಾಳನೂರ ಧಾಬಾ ಬಳಿ ಪಾರ್ಟಿ ಮಾಡಿ ಕೊಲೆ ಮಾಡಿದ್ದಾರೆ ಅಂತಾ ಕಣ್ಣಿರು ಹಾಕಿದ್ದಾರೆ.