ಅವನು ಹೇಗೆ ಸಾಯುತ್ತಾನೆ? ದಿಲ್ಲಿ -6 ರ ಕ್ಲೈಮಾಕ್ಸ್ ದೃಶ್ಯಕ್ಕೆ ಕಾರಣವಾದ ರಿಷಿ ಕಪೂರ್ ಮಾತು ನೆನಪಿಸಿಕೊಂಡ ಅಭಿಷೇಕ್
ಅಭಿಷೇಕ್ ಬಚ್ಚನ್ ಅವರು ತಮ್ಮ 2009 ರ ಚಲನಚಿತ್ರ ದಿಲ್ಲಿ 6 ರ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ ಮತ್ತು ಹೆಚ್ಚು ಚರ್ಚಿಸಲ್ಪಟ್ಟ ಮುಕ್ತಾಯ(ending) ಬಗ್ಗೆ ಕೆಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದ ಈ ಚಿತ್ರದಲ್ಲಿ ಸೋನಮ್ ಕಪೂರ್, ದಿವಂಗತ ನಟ ರಿಷಿ ಕಪೂರ್, ವಹೀದಾ ರೆಹಮಾನ್ ಮತ್ತು ದಿವ್ಯಾ ದತ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವೆನಿಸ್ ಚಲನಚಿತ್ರೋತ್ಸವಕ್ಕೆ ಕಾಲಿಟ್ಟ ಈ ಚಲನಚಿತ್ರವು ಎರಡು ಅಂತ್ಯಗಳನ್ನು ಹೊಂದಿದೆ. ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಅಭಿನಯಿಸಿರುವ ರೋಶನ್ ಪಾತ್ರ ಕನಸಿನಲ್ಲಿ ತನ್ನ ಅಜ್ಜನನ್ನು ಸ್ವರ್ಗದಲ್ಲಿ ಭೇಟಿಯಾದ ನಂತರ ಮತ್ತೆ ಜೀವ ಪಡೆಯುವುದನ್ನು ತೋರಿಸುತ್ತದೆ.
ಇದರಲ್ಲಿ ಅಮಿತಾಬ್ ಬಚ್ಚನ್ ಅಜ್ಜನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಮೂಲ ಚಿತ್ರದ ಅಂತ್ಯ ರೋಶನ್ ಸಾವನ್ನು ತೋರಿಸುತ್ತದೆ.
ಸಂದರ್ಶನದಲ್ಲಿ, ಬಚ್ಚನ್ ರಿಷಿ ಕಪೂರ್ ಮೂಲ ಅಂತ್ಯದ ಕಥೆಯ ಬಗ್ಗೆ ಅಸಮಾಧಾನ ಹೊಂದಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಮೂಲತಃ, ರೋಶನ್ ಸಾಯಬೇಕಿತ್ತು. ಆದರೆ ಚಿಂಟು ಚಿಕ್ಕಪ್ಪ ( ರಿಷಿಕಪೂರ್) ಅವನು ಹೇಗೆ ಸಾಯಲು ಸಾಧ್ಯ? ನೀವು ಭರವಸೆಯನ್ನು ಇಡಬೇಕು ಮತ್ತು ನಾನು ಈಗ ವಿಮಾನವನ್ನು ಹಿಡಿಯಲಿದ್ದೇನೆ ಎಂದು ಕ್ಲೈಮಾಕ್ಸ್ ದೃಶ್ಯಕ್ಕೆ ಕಾರಣವಾದ ಬಗ್ಗೆ ನೆನಪಿಸಿಕೊಂಡಿದ್ದಾರೆ.
ಇದಲ್ಲದೆ, ಅಭಿಷೇಕ್ ರಿಷಿ ಕಪೂರ್ ತಮ್ಮ ಅಭಿನಯದಿಂದ ಹೃದಯವನ್ನು ಗೆದ್ದ ಸಮಯವನ್ನೂ ನೆನಪಿಸಿಕೊಂಡರು. ಒಂದು ದೃಶ್ಯದ ಕುರಿತು ಮಾತನಾಡುತ್ತಾ, ಅವರು ಕಾಫಿ ಮಗ್ ಅನ್ನು ಹಿಡಿದಿದ್ದರು, ಆದರೆ ಅವರ ಕಲೆ ಹೇಗಿತ್ತು ಎಂದರೆ ಚಿಂಟು ಅಂಕಲ್ ಕಾಫಿ ಮಗ್ ಹಿಡಿದು ಕ್ಯಾಮರಾ ಮುಂದೆ ಇದ್ದರೂ ಕ್ಯಾಮರಾ ಆನ್ ಮತ್ತು ಆಫ್ ಕ್ಯಾಮರಾ ಒಂದೇ ಆಗಿರುತ್ತಿತ್ತು . ಏಕೆಂದರೆ ಚಿಂಟು ಅಂಕಲ್ ಕ್ಯಾಮೆರಾದ ಎದುರು ಮತ್ತು ನಂತರ ಒಂದೇ ರೀತಿ ಇರುತ್ತಿದ್ದರು ಎಂದು ಅಭಿಷೇಕ್ ಬಚ್ಚನ್ ರಿಷಿ ಕಪೂರ್ ನಟನೆಯನ್ನು ಶ್ಲಾಘಿಸಿದ್ದಾರೆ.
ಕ್ಯಾನ್ಸರ್ನೊಂದಿಗೆ ಎರಡು ವರ್ಷಗಳ ಹೋರಾಟದ ನಂತರ 2020 ರ ಏಪ್ರಿಲ್ನಲ್ಲಿ ರಿಷಿ ಕಪೂರ್ ನಿಧನರಾದರು.
ಕಿಡ್ನಿ ಸ್ಟೋನ್ ಸಮಸ್ಯೆಗೆ ಬೀಟ್ರೂಟ್ ನ ಮನೆಮದ್ದುhttps://t.co/eee6aOjFG0
— Saaksha TV (@SaakshaTv) April 8, 2021
ಉರಿಬಿಸಿಲಿಗೆ ತಂಪಾದ ಬೂದು ಕುಂಬಳಕಾಯಿ ಜ್ಯೂಸ್https://t.co/trQ50Lcaki
— Saaksha TV (@SaakshaTv) April 8, 2021
ತಂಪಾದ ಆರೋಗ್ಯಕರ ರಾಗಿ ಅಂಬಲಿ#raagi #healthy #cooking #saakshatv https://t.co/uHFsZgf2ck
— Saaksha TV (@SaakshaTv) April 3, 2021
ನೆಹ್ವಾಲ್ ಅವರ ನೈಜ ಆಟದ ಚಿತ್ರಣ ‘ಸೈನಾ’ ಚಿತ್ರದಲ್ಲಿಲ್ಲ !https://t.co/qRp7c66FMy
— Saaksha TV (@SaakshaTv) April 7, 2021
#AbhishekBachchan #delhi6 #RishiKapoor