ಬೆಳ್ಳಂಬೆಳಿಗ್ಗೆ ರಾಜ್ಯದ 69 ಕಡೆ ಎಸಿಬಿ ದಾಳಿ ACB saaksha tv
ಬೆಂಗಳೂರು : ಬೆಳ್ಳಂ ಬೆಳಿಗ್ಗೆ ರಾಜ್ಯದ ಒಟ್ಟು 69 ಕಡೆ ಎಬಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 15 ಅಧಿಕಾರಿಗಳ ಮೇಲೆ ನಿರಂತರ ದೂರು ಬಂದ ಹಿನ್ನೆಲೆ ಈ ದಾಳಿ ನಡೆಸಲಾಗಿದೆ. ಎಸಿಬಿ 8 ಎಸ್ ಪಿ 100 ಮಂದಿ ಅಧಿಕಾರಿಗಳು, 300 ಮಂದಿ ಸಿಬ್ಬಂದಿ ಸೇರಿ ಒಟ್ಟು 408 ಜನರಿಂದ ದಾಳಿ ನಡೆದಿದೆ.
ಇತ್ತ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ನಡೆಸಿದ್ದು, ನಾಲ್ವರು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಮನೆ ಮೇಲೆ ದಾಳಿ ನಡೆಲಾಗಿದೆ. ನಾಗರಾಜ್, ಸಕಾಲ ಕೆಎಎಸ್ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಎಬಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಜಶೇಖರ, ಫಿಜಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ, ಮಾಯಣ್ಣ, ಬಿಬಿಎಂಪಿ ಸಿಬ್ಬಂದಿ, ಬಾಗಲಗುಂಟೆಯ ಗಿರಿ, ಬಿಬಿಎಂಪಿ ಸಿಬ್ಬಂದಿ, ಹೀಗೆ ಬೆಂಗಳೂರಿನಲ್ಲಿ ಒಟ್ಟು ನಾಲ್ವರ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ.
ಎಸಿಬಿ ದಾಳಿಗೊಳಗಾದ ಸರ್ಕಾರಿ ಅಧಿಕಾರಿಗಳು
01.ಕೆ.ಎಸ್ ಲಿಂಗೇಗೌಡ
ಎಕ್ಸಿಕ್ಯೂಟಿವ್ ಎಂಜಿನಿಯರ್
ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರು
02. ಶ್ರೀನಿವಾಸ್ ಕೆ
ಎಕ್ಸಿಕ್ಯೂಟಿವ್ ಎಂಜಿನಿಯರ್
ಹೆಚ್.ಎಲ್.ಬಿ.ಸಿ ಮಂಡ್ಯ
03. ಲಕ್ಷ್ಮಿಕಾಂತಯ್ಯ
ರೆವಿನ್ಯೂ ಇನ್ಸ್’ಪೆಕ್ಟರ್
ದೊಡ್ಡಬಳ್ಳಾಪುರ
04. ವಾಸುದೇವ್,
ಪ್ರಾಜೆಕ್ಟ್ ಮ್ಯಾನೇಜರ್
ನಿರ್ಮಿತಿ ಕೇಂದ್ರ ಬೆಂಗಳೂರು
05. ಬಿ.ಕೃಷ್ಣಾರೆಡ್ಡಿ
ಜನರಲ್ ಮ್ಯಾನೇಜರ್
ನಂದಿನಿ ಡೈರಿ ಬೆಂಗಳೂರು
06. ಟಿ.ಎಸ್.ರುದ್ರೇಶಪ್ಪ
ಜಾಯಿಂಟ್ ಡೈರೆಕ್ಟರ್
ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್
ಗದಗ
07. ಎ.ಕೆ.ಮಸ್ತಿ
ಕೋ ಆಪರೇಟಿವ್ ಡೆವಲಪ್ಮೆಂಟ್ ಆಫೀಸರ್
ಸವದತ್ತಿ ಡೆಪ್ಯೂಟೇಷನ್, ಬೈಲಹೊಂಗಲ
08. ಸದಾಶಿವ ಮರಲಿಂಗಣ್ಣನವರ್
ಸೀನಿಯರ್ ಮೋಟಾರ್ ಇನ್ಸ್’ಪೆಕ್ಟರ್ ಗೋಕಾಕ್
09.ನಾತಾಜೀ ಹೀರಾಜಿ ಪಾಟೀಲ್
ಗ್ರೂಪ್ ಸಿ ಬೆಳಗಾಂ ಹೆಸ್ಕಾಂ
10.ಕೆ.ಎಸ್.ಶಿವಾನಂದ್
ರಿಟೈರ್ಡ್ ಸಬ್ ರಿಜಿಸ್ಟರ್ ಬಳ್ಳಾರಿ
11. ರಾಜಶೇಖರ್, ಫಿಜಿಯೋಥೆರಪಿಸ್ಟ್
ಯಲಹಂಕ ಸರ್ಕಾರಿ ಆಸ್ಪತ್ರೆ
12. ಮಾಯಣ್ಣ.ಎಂ
ಎಫ್.ಡಿ.ಸಿ ಬಿಬಿಎಂಪಿ ಬೆಂಗಳೂರು
ರೋಡ್ಸ್ & ಇನ್ಸ್ಫಾಸ್ಟ್ರಕ್ಚರ್
13. ಎಲ್.ಸಿ.ನಾಗರಾಜ್,
ಸಕಾಲ, ಅಡ್ಮಿನಿಸ್ಟೇಷನ್ ಆಫಿಸರ್
ಬೆಂಗಳೂರು
14. ಜಿ.ವಿ.ಗಿರಿ
ಡಿ ಗ್ರೂಪ್ ಸಿಬ್ಬಂದಿ
ಬಿಬಿಎಂಪಿ ಯಶವಂತಪುರ
15. ಎಸ್.ಎಂ.ಬಿರಾದಾರ್
ಜಾಯಿಂಟ್ ಎಂಜಿನಿಯರ್
ಲೋಕೋಪಯೋಗಿ ಇಲಾಖೆ
ಜೇವರ್ಗಿ