ಹೊಸಪೇಟೆ : ಎಸಿಬಿ ACB ಬಲೆಗೆ ಬಿದ್ದ ಜೆಸ್ಕಾಂ ಎಇಇ
ಹೊಸಪೇಟೆ : ಲಂಚ ಪಡೆದ ಆರೋಪದಲ್ಲಿ ಹೂವಿನಹಡಗಲಿಯ ಜೆಸ್ಕಾಂ ಎಇಇ ಭಾಸ್ಕರ್ ಎಂಬುವವರನ್ನ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಎಇಇ ಭಾಸ್ಕರ್ ಅವರು ಬಸರಹಳ್ಳಿ ತಾಂಡದ ರೈತ ಉಮೇಶ್ ನಾಯ್ಕ್ ಜಮೀನಿಗೆ ಟಿಸಿ ಅಳವಡಿಸಲು 45 ಸಾವಿರ ರೂಪಾಯಿ ಲಂಚ ಕೇಳಿದ್ದರಂತೆ.
ರೈತ ಉಮೇಶ್ ನಾಯ್ಕ್ 25 ಸಾವಿರ ರೂಪಾಯಿ ಹಣ ಕೊಟ್ಟಿದ್ದಾರೆ.
ಭಾಸ್ಕರ್ ಮತ್ತಷ್ಟು ಲಂಚಕ್ಕೆ ಬೇಡಿಕೆ ಇಟ್ಟ ಪರಿಣಾಮ ರೈತ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ದೂರಿನಂತೆ ಎಸಿಬಿ ಅಧಿಕಾರಿಗಳು ಜೆಸ್ಕಾಂ ಕಚೇರಿ ಮೇಲೆ ದಾಳಿ ಮಾಡಿ ತನಿಖೆ ನಡೆಸುತ್ತಿದ್ದಾರೆ.