ಸಾವಿನಲ್ಲೂ ಸಾರ್ಥಕತೆ ಮೆರೆದ ಅಭಿನಯ ಶಾರದೆ
ಬೆಂಗಳೂರು : ವಯೋ ಸಹಜ ಖಾಯಿಲೆಯಿಂದ ಇಂದು ಕೊನೆಯುಸಿರೆಳೆದ ಕನ್ನಡದ ಹೆಮ್ಮೆಯ ಹಿರಿಯ ನಟಿ ಜಯಂತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಜಯಂತಿ ಅವರ ತಮ್ಮ ಎರಡು ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾ ರಾಜ್ ಕುಮಾರ್ ಐ ಬ್ಯಾಂಕ್ ಗೆ ನೀಡಲಾಗಿದೆ.
ಈ ಮೂಲಕ ಜಯಂತಿ ಅವರು ಸಾವಿನಲ್ಲೂ ಕೂಡ ಮಾನವೀಯತೆಯನ್ನು ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಇನ್ನು ಜಯಂತಿ ಅವರ ಅವರ ಅಂತ್ಯಕ್ರಿಯೆ ಬನಶಂಕರಿ ಚಿತಗಾರದಲ್ಲಿ ನೇರವೇರಿಸಲಾಯಿತು.
ಜಯಂತಿ ಕನ್ನಡದಲ್ಲಿ 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ತೆಲುಗು, ತಮಿಳು, ಮಲಿಯಾಲಂ, ಹಿಂದಿ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.