ತಮಿಳುನಾಡು – ಮತದಾರರ ಮನವೊಲಿಸಲು ಬಟ್ಟೆ ಒಗೆದುಕೊಟ್ಟ ಎಐಎಡಿಎಂಕೆ ಅಭ್ಯರ್ಥಿ
ನಾಗಪಟ್ಟಣಂ: ತಮಿಳುನಾಡಿನ ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಸೋಮವಾರ ಮಹಿಳೆಯೊಬ್ಬರ ಬಟ್ಟೆಗಳನ್ನು ಸಾರ್ವಜನಿಕವಾಗಿ ತೊಳೆದು ಮತ ಚಲಾಯಿಸುವಂತೆ ಕೇಳಿಕೊಂಡಿದ್ದಾರೆ.
ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ತಂಗಾ ಕಾತಿರವನ್ ಸೋಮವಾರ ನಾಗೋರ್ ಬಳಿ ಮತ ಚಲಾಯಿಸಲು ಹೋದಾಗ ಸಾಕಷ್ಟು ಸಂಚಲನ ಮೂಡಿಸಿದ್ದಾರೆ.
ಅವರು ಮತ್ತು ಇತರ ಪಕ್ಷದ ಕಾರ್ಯಕರ್ತರು ವಂಡಿಪೆಟ್ಟೈನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾಗ, ಒಬ್ಬ ಮಹಿಳೆ ತನ್ನ ಕುಟುಂಬ ಸದಸ್ಯರ ಬಟ್ಟೆ ಒಗೆಯುವುದನ್ನು ತಂಗಾ ಕಾತಿರವನ್ ನೋಡಿದರು. ಕಾತಿರವನ್ ಮಹಿಳೆಯನ್ನು ಸಮೀಪಿಸಿ ಕೆಲವು ಬಟ್ಟೆಗಳನ್ನು ತೊಳೆಯಲು ಮುಂದಾದರು. ಮೊದಲು ಹಿಂಜರಿಕೆ ಮತ್ತು ವಿಚಿತ್ರತೆಯನ್ನು ಅನುಭವಿಸಿದ ಮಹಿಳೆ ನಂತರ ತೊಳೆಯಬೇಕಾದ ಬಟ್ಟೆಗಳನ್ನು ಅವರಿಗೆ ಹಸ್ತಾಂತರಿಸಿದಳು.
ಕಾತಿರವನ್ ಕುಳಿತು ಕೆಲವು ನಿಮಿಷಗಳಲ್ಲಿ ಆ ಬಟ್ಟೆಗಳನ್ನು ಒಗೆದುಕೊಟ್ಟರು.. ಜೊತೆಗೆ ಪಕ್ಕದಲ್ಲಿಯೇ ಇದ್ದ ಕೆಲವು ಪಾತ್ರೆಗಳನ್ನು ತೊಳೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾತಿರವನ್, ನಾನು ಚುನಾವಣೆಯಲ್ಲಿ ಗೆದ್ದರೆ ಮನೆ ಮನೆಗೆ ವಾಷಿಂಗ್ ಮೆಷಿನ್ ನೀಡುತ್ತೇನೆ. ಈ ವಿಚಾರವನ್ನು ತಿಳಿಸಲು ಬಟ್ಟೆಗಳನ್ನು ತೊಳೆದುಕೊಟ್ಟಿದ್ದೇನೆ. ದಿ.ಸಿಎಂ ಜಯಲಲಿತಾ ಅವರು ಮನೆ ಮನೆಗೆ ವಾಷಿಂಗ್ ಮೆಷಿನ್ ನೀಡುವುದಾಗಿ ಮೊದಲು ಭರವಸೆ ನೀಡಿದ್ದರು ಎಂದು ಅವರು ಹೇಳಿದರು.
ಮೇಕೆ ಹಾಲಿನ ಆರೋಗ್ಯ ಪ್ರಯೋಜನಗಳು https://t.co/UpjE1tuFpk
— Saaksha TV (@SaakshaTv) March 21, 2021
ಚಿತ್ರನಟನಿಂದ ಹುಡುಗಿಯ ಕಿಡ್ನಾಪ್ ! ಯಾವುದೇ ಸಿನಿಮಾ ಲವ್ಸ್ಟೋರಿಗಿಂತ ಕಮ್ಮಿಯಿಲ್ಲ ಜಗ್ಗೇಶ್ ಪರಿಮಳಾ ದಂಪತಿಗಳ ಲವ್ ಸ್ಟೋರಿ#jaggesh @Jaggesh2https://t.co/CrefNT8dEi
— Saaksha TV (@SaakshaTv) March 23, 2021
ಪ್ರಧಾನಿ ಮೋದಿ ನಂತರ ಯೋಗಿ ಆದಿತ್ಯನಾಥ್ ಪ್ರಧಾನಿಯಾಗಲು ಸಮರ್ಥರೇ? https://t.co/5K5E1JeDk7
— Saaksha TV (@SaakshaTv) March 21, 2021
ದೊಣ್ಣೆ ಮೆಣಸಿನ ವಾಂಗಿಬಾತ್ https://t.co/AL3rMRyFF5
— Saaksha TV (@SaakshaTv) March 19, 2021