ಅದ್ಧೂರಿಯಾಗ ನೆರವೇರಿದ ನಟಿ ಅಮೂಲ್ಯ ಸೀಮಂತ
ಸ್ಯಾಂಡಲ್ ವುಡ್ ನಟಿ ಅಮೂಲ್ಯ ಸದ್ಯ ಮದುವೆಯ ನಂತರ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.. ಕೆಲ ದಿನಗಳ ಹಿಂದಷ್ಟೇ ತಾವು ಗರ್ಭಿಣಿ ಎಂಬ ವಿಚಾರವನ್ನ ಸೋಷಿಯಲ್ ಮೀಡಿಯಾ ಮೂಲಕ ಅಮೂಲ್ಯ ತಿಳಿಸಿದ್ರು.. ಇದೀಗ ಅವರಿಗೆ 7 ತಿಂಗಳು ತುಂಬಿದ್ದು ಅದ್ಧೂರಿಯಾಗಿ ಅವರ ಸೀಮಂತ ಶಾಸ್ತ್ರ ನೆರವೇರಿಸಲಾಗಿದೆ.. ಈ ಸಂಬಂಧಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು , ಅಮೂಲ್ಯಗೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ಈಗ ಅಮೂಲ್ಯ ಅವರಿಗೆ ಕುಟುಂಸ್ಥರು ಸೀಮಂತ ಶಾಸ್ತ್ರವನ್ನು ನೆರೆವೇರಿಸಿದ್ದಾರೆ.
ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅಮೂಲ್ಯ ವಿವಾಹದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಅಮೂಲ್ಯ ಈಗ 7 ತಿಂಗಳ ಗರ್ಭಿಣಿಯಾಗಿರೋದ್ರಿಂದ ಅವರ ಕುಟುಂಬಸ್ಥರು ಅವರ ಸೀಮಂತ ಶಾಸ್ತ್ರವನ್ನು ನೆರೆವೇರಿಸಿದ್ದು, ಅವರ ಅಭಿಮಾನಿಗಳು ಸೀಮಂತದ ಫೋಟೋಗಳನ್ನ ವೈರಲ್ ಮಾಡ್ತಿದ್ದಾರೆ. ಈ ಸೀಮಂತ ಶಾಸ್ತ್ರದಲ್ಲಿ ಅಮೂಲ್ಯ ಆಪ್ತರು , ಸ್ನೇಹಿತರು ಕುಟುಂಬದವರಷ್ಟೇ ಪಾಲ್ಗೊಂಡಿದ್ದಾರೆ.. ಅಮೂಲ್ಯ ಪತಿ ಜಗದೀಶ್ ರಾಜಕೀಯ ಹಿನ್ನೆಲೆಯಾಗಿರುವುದರಿಂದ ರಾಜಕೀಯ ಗಣ್ಯರು ಕೂಡ ಆಗಮಿಸಿರುವುದು ತಿಳಿದು ಬಂದಿದೆ..
ಸದ್ಯ ಬಾಲ ನಟಿಯಾಗಿ ಸಿನಿಮಾರಂಗಕ್ಕೆ ಆಗಮಿಸಿದ್ದ ಅಮೂಲ್ಯ ನಂತರ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದ ಚೆಲುವಿತ ಚಿತ್ತಾರ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ನಾಯಕಿಯಗಿ ಬಡ್ತಿ ಪಡೆದರು.. ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಯಶ್ ಜೊತೆಗೂ ಗಜಕೇಸರಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.. ಕೊನೆಯದಾಗಿ 2017ರಲ್ಲಿ ಮಾಸ್ತಿಗುಡಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.. ಆ ನಂತರ ಚಿಕ್ಕ ಅತಿಥಿ ಪಾತ್ರದಲ್ಲಿ ಮುಗುಳುನಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.. ಆ ನಂತರ ಸಿನಿಮಾಗಳಲ್ಲಿ ನಟಿಸಿಲ್ಲ..