ಟೊಮ್ಯಾಟೋ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ಬೇಲಿ ತುಳಿದು ರೈತ ಸಾವು
ಟೊಮ್ಯಾಟೋ ತೋಟಕ್ಕೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ಬೇಲಿ ತಗಲು ರೈತನೊಬ್ಬ ಸಾವನ್ನಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ರೊಚ್ಚಿಗೆದ್ದ ಮೃತ ರೈನ ರೈತನ ಸಂಬಂಧಿಕರು ಮತ್ತು ಸ್ಥಳಿಯರು ಜಮೀನಿಗೆ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿದ್ದ ರೈತನ್ನ ಮಾರಣಾಂತಿಕವಾಗಿ ಹೊಡೆದು ಸಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೋಕಿನ ಚರಕಮಟ್ಟೇನಹಳ್ಳಿ ಗ್ರಾಮದ ಚಿಕ್ಕಹನುಮೇನಹಳ್ಳಿಯಲ್ಲಿ ಜಮೀನು ಮಾಲೀಕ ಅಶ್ವತ್ಥ ರಾವ್ ತಮ್ಮ ಟೊಮ್ಯಾಟೊ ತೋಟಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದರು ಇದರ ಅರಿವಿಲ್ಲದೆ ರೈತ ವಸಂತರಾವ್ ವಿದ್ಯುತ್ ಬೇಲಿ ತಗುಲಿ ಮೃತಪಟ್ಟಿದ್ದರು.
ರೈತ ವಸಂತರಾವ್ ಮೃತರಾದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಜಮೀನು ಮಾಲೀಕ ಅಶ್ವತ್ಥ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡರು ಈ ಸಮಯದಲ್ಲಿ ಆಕ್ರೋಶಗೊಂಡ ಸ್ಥಳಿಯರು ಜಮೀನು ಮಾಲಿಕನನ್ನ ಹೊಡೆದು ಕೊಂದಿದ್ದಾರೆ. ಈ ಸಂಬಂಧ ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆ ನಡೆದದ ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದರು.