ನವಂಬರ್ 8 ರಿಂದ ಅಂಗನವಾಡಿ ಕೇಂದ್ರಗಳು ಆರಂಭ
ನವಂಬರ್ 8 ರಿಂದ ಅಂಗನವಾಡಿ ಕೇಂದ್ರಗಳು ಆರಂಭವಾಗಲಿವೆ ಎಂದು ಮಹಿಳಾ ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ೬೬ ನೆಯ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಧ್ವಜಾರೋಹಣ ನಂತರ ಮಾತನಾಡಿದ ಸಚಿವರು “ಈಗ ಅಂಗನವಾಡಿಗಳು ಆರಂಭ ಇಲ್ಲದಿದ್ದರೂ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಆಹಾರ ನೀಡುವಲ್ಲಿ ಮಕ್ಕಳಿಗೆ ಬಾಣಂತಿಯರಿಗೆ ಹಾಗು ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡಲಾಗಿದೆ” ಎಂದರು.
ಅಂಗನವಾಡಿಗಳ ಆರಂಭಕ್ಕೆ ಸ್ವಚ್ಛತೆ, ಸ್ಯಾನಿಟೈಸರ್ ಮಾಡಲಾಗುವುದು. ಕೊವಿಡ್ ಈಗ ಕಡಿಮೆಯಾಗಿದೆ, ಈಗಾಗಲೇ ಕಾಲೇಜು ಶಾಲೆಗಳು ಆರಂಭವಾಗಿವೆ, ಈಗ ಅಂಗನವಾಡಿಗಳು ಸಹ ಆರಂಭವಾಗಲಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿರುವ ಹಾಲಪ್ಪ ಆಚಾರ ಹೇಳಿದರು.
ನವಂಬರ್ 8 ರಿಂದ ಅಂಗನವಾಡಿ ಕೇಂದ್ರಗಳು ತೆರಯಲಿದ್ದು. ಮೊದಲ ಹಂತದಲ್ಲಿ ಪ್ರತಿ ದಿನಕ್ಕೆ 2 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಈಗಾಗಲೇ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದ್ದು, ಇದೀಗ ಅಂಗನವಾಡಿಗಳನ್ನು ತೆರೆಯಲು ಹಸಿರು ನಿಶಾನೆ ತೋರಿದೆ. ಒಟ್ಟಿನಲ್ಲಿ ಎರಡು ವರ್ಷಗಳಿಂದ ಮನೆಯಲ್ಲಿ ಇದ್ದ ಮಕ್ಕಳು ಈ ಶಾಲೆ ,ಅಂಗನವಾಡಿಗಳ ಕಡೆ ಮುಖ ಮಾಡಿದ್ದಾರೆ.