BJP | ಸುಗ್ರಿವಾಜ್ಞೆಯ ಮೂಲಕ ಮತಾಂತರ ನಿಯಂತ್ರಣ ಕಾಯ್ದೆ ಜಾರಿ
ಬೆಂಗಳೂರು : ಬಸವರಾಜ ಬೊಮ್ಮಾಯಿ ಸರ್ಕಾರ ಸಾಮಾಜಿಕ ಶಾಂತಿಗಾಗಿ ಮತಾಂತರ ನಿಯಂತ್ರಿಸಲು ಮತಾಂತರ ನಿಯಂತ್ರಣ ಕಾಯ್ದೆಯನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೊಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧ. ಅಪ್ರಾಪ್ತರು, ಬುದ್ಧಿಮಾಂಧ್ಯರು, ಮಹಿಳೆಯರು ಹಾಗೂ ಪರಿಶಿಷ್ಟ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3 ರಿಂದ 10 ವರ್ಷ ಜೈಲು ಹಾಗೂ 50 ಸಾವಿರ ದಂಡ. ಇತರ ವರ್ಗದವರನ್ನು ಮತಾಂತರಿಸಿದರೆ ಕನಿಷ್ಠ 3 ರಿಂದ 10 ವರ್ಷ ಜೈಲು ಹಾಗೂ 25 ಸಾವಿರ ದಂಡ.
ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧ.
√ ಅಪ್ರಾಪ್ತರು, ಬುದ್ಧಿಮಾಂಧ್ಯರು, ಮಹಿಳೆಯರು ಹಾಗೂ ಪರಿಶಿಷ್ಟ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3 ರಿಂದ 10 ವರ್ಷ ಜೈಲು ಹಾಗೂ 50 ಸಾವಿರ ದಂಡ.
√ ಇತರ ವರ್ಗದವರನ್ನು ಮತಾಂತರಿಸಿದರೆ ಕನಿಷ್ಠ 3 ರಿಂದ 10 ವರ್ಷ ಜೈಲು ಹಾಗೂ 25 ಸಾವಿರ ದಂಡ.#IndiaAgainstConversion
— BJP Karnataka (@BJP4Karnataka) May 13, 2022
ಸಂವಿಧಾನ ಬದ್ಧ ಧಾರ್ಮಿಕ ಆಚರಣೆ, ಆಯ್ಕೆಯ ಧರ್ಮ ಪಾಲಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ, ಧರ್ಮ ಪ್ರಚಾರವನ್ನೂ ಮಾಡಬಹುದು. ಆದರೆ ಒಬ್ಬ ವ್ಯಕ್ತಿಯನ್ನು ಆಸೆ, ಆಮಿಷ, ಬಲಾತ್ಕಾರದ ಮೂಲಕ ಮತಾಂತರಿಸುವ ಹಕ್ಕು ಯಾರಿಗೂ ಇಲ್ಲ. ಬಲವಂತದ ಮತಾಂತರಕ್ಕೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಬರೆದುಕೊಂಡಿದೆ.
ಬಲವಂತದ ಮತಾಂತರ ತಡೆಯುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ #ಮತಾಂತರನಿಯಂತ್ರಣಕಾಯ್ದೆ ಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ.
√ ಬಲವಂತದ ಮತಾಂತರ ಅಸಿಂಧು
√ ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧ
√ ಆಮಿಷದ ಮೂಲಕ ಮತಾಂತರಿಸುವುದು ಅಪರಾಧ
√ ಭಾವನಾತ್ಮಕವಾಗಿ ಸೆಳೆದು ಮತಾಂತರಿಸುವಂತಿಲ್ಲ#IndiaAgainstConversion— BJP Karnataka (@BJP4Karnataka) May 13, 2022