ರಾಮನವಮಿ ಆಚರಿಸಿದ ಯುವಕನ ಮೇಲೆ ಹಲ್ಲೆ
ಕಲಬುರಗಿ: ನಿನ್ನೆ ಭಾನುವಾರ ರಾಮನವಮಿಯನ್ನು ಆಚರಿಸಿದ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ನಿನ್ನೆ ರಾಮನವಮಿಯನ್ನು ಆಚರಿಸಲಾಗಿತ್ತು. ಈ ವೇಳೆ ಯುಕನೋರ್ವನ ಮೇಲೆ ನಡೆಸಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳಾದ ವಿಶ್ವನಾಥ್ ಮತ್ತು ನರೇಂದ್ರನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಇನ್ನೂ ಘಟನೆ ಸಂಬಂಧ ರಾಹುಲ್, ತೆಲಂಗಾಣದ ಸಾದಿಕ್, ರಾಹುಲ್ ಸೇರಿ ಮೂವರು ವಿದ್ಯಾರ್ಥಿಗಳ ವಿರುದ್ಧ ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನವಮಿ ಹಿನ್ನಲೇ ನಿನ್ನೆ ಭಾನುವಾರ ಭರ್ಜರಿ ಕಾರ್ಯಕ್ರಮ ಜರುಗಿದೆ. ಅಲ್ಲದೇ ಹಬ್ಬದ ಹಿನ್ನಲೇಯಲ್ಲಿ ನಗರದಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಿ, ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕಾರ ಆದೇಶ ಹೊರಡಿಸಿದ್ದರು. ಇನ್ನೂ ಕಲಬುರಗಿ ನಗರದಲ್ಲಿ ರಾಮತೀರ್ಥದಿಂದ ಶ್ರೀರಾಮ ಶೋಭಾಯಾತ್ರೆ ನಡೆಯಿತು.
ಈ ಸಂದಂರ್ಭದಲ್ಲಿ ಭಾವೈಕ್ಯೆತೆಯ ಪ್ರಸಂಗವೊಂದು ನಡೆದಿದೆ. ಶೋಭಾಯಾತ್ರೆ ವೇಳೆ ಮುಸ್ಲಿಂ ಭಾಂದವರು ಜ್ಯೂಸ್, ತಂಪು ಪಾನೀಯಗಳನ್ನು ಹಂಚಿದ್ದಾರೆ. ಕಲಬುರಗಿ ನಗರದ ಖಾದ್ರಿ ಚೌಕ್ ನಲ್ಲಿ ತಂಪು ಪಾನಿಯವನ್ನು ಶ್ರೀರಾಮನ ಭಕ್ತರಿಗೆ ವಿತರಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ರಾಮ ನವಮಿಯಂದು ಮುಸ್ಲಿಂ ಬಾಂಧವರು ಇದೇ ರೀತಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.