Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology : ರಾಹು- ಕೇತುವಿನ ಪ್ರಭಾವವು ಹೇಗೆ ಕಾಳ ಸರ್ಪದೋಷಕ್ಕೆ ಕಾರಣವಾಗುತ್ತೆ ಗೊತ್ತಾ.? ಇಲ್ಲಿದೆ ಸರಳ ಪರಿಹಾರ ಮಾರ್ಗ..

Namratha Rao by Namratha Rao
January 29, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

Astrology : ರಾಹು- ಕೇತುವಿನ ಪ್ರಭಾವವು ಹೇಗೆ ಕಾಳ ಸರ್ಪದೋಷಕ್ಕೆ ಕಾರಣವಾಗುತ್ತೆ ಗೊತ್ತಾ.? ಇಲ್ಲಿದೆ ಸರಳ ಪರಿಹಾರ ಮಾರ್ಗ..

ಹಿಂದೂ ಧರ್ಮದಲ್ಲಿ ಹಾವುಗಳಿಗೆ ವಿಶೇಷ ಸ್ಥಾನ ಹಾಗೂ ಗೌರವವನ್ನು ನೀಡಲಾಗುತ್ತದೆ. ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಹಾವುಗಳು ದೇವತೆಗಳೊಂದಿಗೆ ನಿಕಟ ಸಂಬಂಧವನ್ನು ಪಡೆದುಕೊಂಡಿವೆ.

ನಾಗರ ಹಾವು ಮತ್ತು ಕಾಳ ಸರ್ಪವು ಅತ್ಯಂತ ಶಕ್ತಿಯುತವಾದ ಹಾಗೂ ದೈವ ಶಕ್ತಿಯನ್ನು ಪಡೆದಿರುವ ಸರೀಸೃಪ. ಇವುಗಳನ್ನು ಸಾಯಿಸುವುದು ಅಥವಾ ಹಿಂಸಿಸುವುದು ಮಾಡಿದರೆ ನಮ್ಮ ಜನ್ಮಕ್ಕೆ ಕಳಂಕ ಹಾಗೂ ಮಹಾ ಪಾಪ ಅಂಟಿಕೊಳ್ಳುವುದು. ಒಮ್ಮೆ ಹಾವು ದ್ವೇಷವನ್ನು ಹೊಂದಿದ್ದರೆ 12 ವರ್ಷಗಳ ಕಾಲ ಕಾಯುವುದು.

Related posts

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

May 31, 2023
ಕೋಟಿಗಟ್ಟಲೆ ಸಾಲದ ಹೊರೆ ಹೊತ್ತಿದ್ದರೂ ಮನೆಗೆ ಬರಲು ಈ ಒಂದು ಚಿತ್ರ ಸಾಕು. ದೊಡ್ಡ ಸಾಲದ ಹೊರೆ ಸ್ವಲ್ಪಮಟ್ಟಿಗೆ ಕಣ್ಮರೆಯಾಗುತ್ತದೆ!

ಕೋಟಿಗಟ್ಟಲೆ ಸಾಲದ ಹೊರೆ ಹೊತ್ತಿದ್ದರೂ ಮನೆಗೆ ಬರಲು ಈ ಒಂದು ಚಿತ್ರ ಸಾಕು. ದೊಡ್ಡ ಸಾಲದ ಹೊರೆ ಸ್ವಲ್ಪಮಟ್ಟಿಗೆ ಕಣ್ಮರೆಯಾಗುತ್ತದೆ!

May 30, 2023

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ದೀರ್ಘ ಸಮಯದ ನಂತರವಾದರೂ ಅಂದುಕೊಂಡ ಶಿಕ್ಷೆಯನ್ನು ನೀಡುವುದು ಎಂದು ನಂಬಲಾಗಿದೆ. ಕಾಳ ಸರ್ಪದೋಷವೆಂದು ನೀವು ಕೇಳಿರಬಹುದು, ಇದು ಮುಖ್ಯವಾಗಿ ಜನ್ಮಕುಂಡಲಿಯಲ್ಲಿನ ರಾಹು- ಕೇತುವಿನ ಸ್ಥಾನದಿಂದಾಗಿ ಕಂಡು ಬರುವ ದೋಷ. ಈ ದೋಷಗಳಲ್ಲೂ ಹಲವು ವಿಧಗಳಿವೆ ಅವು ಯಾವುವು ಹಾಗೂ ದೋಷ ನಿವಾರಣಾ ಪರಿಹಾರ ಕ್ರಮಗಳೇನು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

ವ್ಯಕ್ತಿ ತನ್ನ ಜನ್ಮ ಕುಂಡಲಿಯ ಆಧಾರದ ಮೇಲೆ ಸರ್ಪ ಅಥವಾ ಕಾಳ ಸರ್ಪ ದೋಷ ಇರುವುದನ್ನು ಕಂಡುಕೊಳ್ಳಬಹುದು. ನಂತರ ಅದಕ್ಕೆ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ತಲೆ ದೂರುತ್ತವೆ. ಯಾರು ತಮ್ಮ ಜಾತಕ ಅಥವಾ ಕುಂಡಲಿಯನ್ನು ಹೊಂದಿರುವುದಿಲ್ಲವೋ ಅವರು ಸಹ ಕೆಲವು ಸೂಚನೆಗಳೊಂದಿಗೆ ಕಾಳ ಸರ್ಪ ದೋಷ ಇರುವುದನ್ನು ಗುರುತಿಸಿಕೊಳ್ಳಬಹುದು.

ನಿಜ, ನಿದ್ರೆಯಲ್ಲಿರುವಾಗ ಹಾವುಗಳ ಕನಸು ಕಾಣುವುದು, ಕನಸಿನಲ್ಲಿ ಮನೆಯು ಸಂಪೂರ್ಣವಾಗಿ ನೀರಿನಿಂದ ಮುಳುಗಿದಂತೆ ಕಾಣುವುದು, ಯಾರೋ ಅಪರಿಚಿತರು ತೊಂದರೆ ಕೊಡುವಂತೆ, ಮನೆಯು ಕಳ್ಳತನಕ್ಕೆ ಒಳಗಾಗಿರುವಂತೆ, ಆಸ್ತಿ ಪಾಸ್ತಿ ನಾಶ ಹೊಂದಿರುವಂತೆ,

ಆಪ್ತರು ಸಾವನ್ನು ಕಂಡಂತೆ ಹೀಗೆ ವಿವಿಧ ಬಗೆಯಲ್ಲಿ ಅಹಿತಕರವಾದ ಕನಸುಗಳು ಆಗಾಗ ಕಾಡುತ್ತಲೇ ಇರುತ್ತವೆ ಎಂದಾದರೆ ಅವರ ಜನ್ಮ ಕುಂಡಲಿಯಲ್ಲಿ ಕಾಳ ಸರ್ಪ ತೊಂದರೆ ಇದೆ ಎಂದು ಸುಲಭವಾಗಿ ನಿರ್ಧರಿಸಬಹುದು. ನಾಗ ಮತ್ತು ಕಾಳ ಸರ್ಪ ದೋಷ ಇರುವವರಿಗೆ ಮಾತ್ರ ಇಂತಹ ಕನಸುಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗುವುದು.

 

ಕುಂಡಲಿಯಲ್ಲಿ ರಾಹು ಕೇತುಗಳ ಪ್ರಭಾವ

ನಮ್ಮ ಕುಂಡಲಿಯಲ್ಲಿ ಇರುವ ಕಾಳ ಸರ್ಪ ದೋಷವು ಬದುಕಿನ ನೆಮ್ಮದಿ, ಯಶಸ್ಸು, ಆರ್ಥಿಕ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಈ ದೋಷವು ರಾಹು ಮತ್ತು ಕೇತು ಗ್ರಹಗಳಿಂದ ಉಂಟಾಗುವುದು ಎಂದು ಹೇಳಲಾಗುವುದು. ಅಂದರೆ ಕುಂಡಲಿಯಲ್ಲಿ 1, 2, 5, 8ನೇ ಮನೆಯಲ್ಲಿ ರಾಹು-ಕೇತು ಇದ್ದರೆ ಅದನ್ನು ಕಾಳ ಸರ್ಪ ದೋಷ ಎಂದು ಪರಿಗಣಿಸಲಾಗುತ್ತದೆ.

1 ಮತ್ತು 2 ನೇ ಮನೆಯಲ್ಲಿ ರಾಹುಗಳಿದ್ದರೆ ವಿವಾಹ ಯೋಗವು ದೀರ್ಘ ವರ್ಷದ ನಂತರ ಬರುವುದು. 5ನೇ ಮನೆಯಲ್ಲಿ ಇದ್ದರೆ ತಡವಾದ ಸಂತಾನ ಭಾಗ್ಯ, 7ನೇ ಮನೆಯಲ್ಲಿ ಇದ್ದರೆ ಲೈಂಗಿಕ ಅಥವಾ ಸಂಸಾರದಲ್ಲಿ ಸಾಕಷ್ಟು ತೊಂದರೆ ಮತ್ತು ಕಷ್ಟಗಳು ಎದುರಾಗುತ್ತವೆ. 8ನೇ ಮನೆಯಲ್ಲಿ ಇದ್ದರೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಹೇಳಲಾಗುವುದು.

ವಿವಿಧ ಬಗೆಯ ಕಾಳಸರ್ಪ ಯೋಗ
ಸರ್ಪ ಎಂದರೆ ಅದೊಂದು ವಿಷದಿಂದ ಕೂಡಿರುವ ಭಯಾನಕ ಪ್ರಾಣಿ. ಇದು ದೈವ ಶಕ್ತಿಯನ್ನು ಹೊಂದಿರುವುದರಿಂದ ಇದನ್ನು ಹೊಡೆದರೆ ಅಥವಾ ಹಿಂಸೆಯನ್ನು ಮಾಡಿದರೆ ಅದರಿಂದ ಅಧಿಕ ಪಾಪಕರ್ಮಗಳು ಸುತ್ತಿಕೊಳ್ಳುತ್ತವೆ.

ಅವು ಏಳು ಜನ್ಮದ ವರೆಗೂ ಕಾಡುತ್ತವೆ ಎಂದು ಹೇಳಲಾಗುವುದು. ಅನಂತ, ವಾಸುಕಿ, ಪದ್ಮನಾಭ, ಕುಳಿಕ, ಶಂಕಪಾಲ, ಮಹಾ ಪದ್ಮ, ತಕ್ಷಕ, ಶೇಷ, ಘಟಕ ಎನ್ನುವ ಹೆಸರುಗಳನ್ನು ಹೊಂದಿರುವ 9 ಬಗೆಯ ಸರ್ಪಗಳಿವೆ. ರಾಹು ಕೇತುಗಳು ಇರುವ ಮನೆಗಳಿಗೆ ಅನುಗುಣವಾಗಿ ಯಾವ ಸರ್ಪ ದೋಷ ಎಂದು ಗುರುತಿಸಲಾಗುವುದು.

ಅನಂತ ಕಾಳ ಸರ್ಪ ಯೋಗ
ಅನಂತ ಕಾಳ ಸರ್ಪ ಯೋಗವು ಅತ್ಯಂತ ದೀರ್ಘಾವಧಿಯ ಕಾಳ ಸರ್ಪ ಯೋಗ. ಇದು ಸುಮಾರು 27 ವರ್ಷಗಳ ಕಾಲ ಬಾಧಿಸುವುದು ಎಂದು ಹೇಳಲಾಗುತ್ತದೆ. ರಾಹು ಒಂದನೇ ಮನೆಯಲ್ಲಿ ಹಾಗೂ ಕೇತು ಏಳನೇ ಮನೆಯಲ್ಲಿ ಇದ್ದರೆ ಅದನ್ನು ಅನಂತ ಕಾಳ ಸರ್ಪಯೋಗ ಎಂದು ಪರಿಗಣಿಸಲಾಗುವುದು.

ಈ ದೋಷ ಹೊಂದಿದವರು ದೀರ್ಘ ಆರೋಗ್ಯ ಸಮಸ್ಯೆ, ಸಂಸಾರದಲ್ಲಿ ಕಲಹ, ಉದ್ಯೋಗದಲ್ಲಿ ತೊಂದರೆಯನ್ನು ಅನುಭವಿಸುವರು. ಇವರು ಅತ್ಯಂತ ಕೀಳು ಮನೋಭಾವವನ್ನು ಹೊಂದಿರುತ್ತಾರೆ.

ವಾಸುಕಿ ಕಾಳ ಸರ್ಪ ಯೋಗ

ನಮ್ಮ ಕುಂಡಲಿಯ 3ನೇ ಮನೆಯಲ್ಲಿ ರಾಹುವಿನ ವಾಸ ವಿದ್ದು, 9ನೇ ಮನೆಯಲ್ಲಿ ಕೇತು ಕುಳಿತುಕೊಂಡಿದ್ದರೆ ಆಗ ವ್ಯಕ್ತಿಯು ವಾಸುಕಿ ಸರ್ಪ ದೋಷವನ್ನು ಅನುಭವಿಸುವನು. ಅದರಿಂದ ವ್ಯಕ್ತಿ ಅಕಾಲಿಕ ಮರಣ, ಹಣದ ಸಮಸ್ಯೆ, ಸಂಬಂಧಗಳಲ್ಲಿ ತೊಂದರೆಯನ್ನು ಅನುಭವಿಸುವನು.

ಪದ್ಮನಾಭ ಕಾಳ ಸರ್ಪ ಯೋಗ
ಈ ಯೋಗವು ವ್ಯಕ್ತಿಗೆ 48 ವರ್ಷ ಕಾಡುವುದು. ಜನ್ಮ ಕುಂಡಲಿಯ 5ನೇ ಮನೆಯಲ್ಲಿ ರಾಹು ಮತ್ತು 11ನೇ ಮನೆಯಲ್ಲಿ ಕೇತುವಿನ ಆಡಳಿತ ಇದ್ದರೆ ಅದು ಪದ್ಮನಾಭ ಕಾಳ ಸರ್ಪ ಯೋಗ ಎನಿಸಿಕೊಳ್ಳುವುದು. ಈ ಸಮಸ್ಯೆ ಇದ್ದವರಿಗೆ ಸಂತಾನ ಹೀನತೆ ಉಂಟಾಗುವುದು. ಇಲ್ಲವೇ ಮಕ್ಕಳ ಬಗ್ಗೆಯೇ ಅಧಿಕ ಚಿಂತನೆ ನಡೆಸಿ ಮಾನಸಿಕ ತೊಂದರೆಯನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಕುಳಿಕ ಕಾಳ ಸರ್ಪ ಯೋಗ
ಆಗಾಗ ಅಪಘಾತಗಳು, ಆರ್ಥಿಕ ನಷ್ಟ ಅನ್ಯರಿಂದ ತೊಂದರೆ ಉಂಟಾಗುತ್ತಿದ್ದರೆ ಅದನ್ನು ಕುಳಿಕ ಕಾಳ ಸರ್ಪ ಯೋಗ ಎಂದು ಹೇಳಲಾಗುವುದು. 2ನೇ ಮನೆಯಲ್ಲಿ ರಾಹು ಮತ್ತು 8ನೇ ಮನೆಯಲ್ಲಿ ಕೇತು ಇದ್ದರೆ ಅದು ಕುಳಿಕ ಕಾಳ ಸರ್ಪದ ಯೋಗವಾಗಿರುತ್ತದೆ.

ಶಂಕಪಾಲ ಕಾಳ ಸರ್ಪಯೋಗ
ಶಂಕಪಾಲ ಕಾಳ ಸರ್ಪ ಯೋಗವು ಸಾಮಾನ್ಯವಾಗಿ 42 ವರ್ಷಗಳ ಕಾಲ ಕಾಡುವುದು. ರಾಹು 4ನೇ ಮನೆಯಲ್ಲಿ ಹಾಗೂ ಕೇತು 10ನೇ ಮನೆಯಲ್ಲಿ ಇರುವಾಗ ಈ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುವುದು. ಈ ದೋಷದಿಂದ ವ್ಯಕ್ತಿ ಸಾಕಷ್ಟು ಆತಂಕ ಹಾಗೂ ಒತ್ತಡದಿಂದ ಜೀವನವನ್ನು ನಡೆಸುವನು.

ಮಹಾಪದ್ಮ ಕಾಳ ಸರ್ಪ ಯೋಗ
ಈ ದೋಷವನ್ನು ವ್ಯಕ್ತಿ 54 ವರ್ಷಗಳ ಕಾಲ ಅನುಭವಿಸಬೇಕಾಗುವುದು. ಕುಂಡಲಿಯ 6ನೇ ಮನೆಯಲ್ಲಿ ರಾಹು ಮತ್ತು 12ನೇ ಮನೆಯಲ್ಲಿ ಕೇತುವಿನ ವಾಸ್ತವ್ಯ ಇರುತ್ತದೆ. ಈ ದೋಷದಿಂದಾಗಿ ವ್ಯಕ್ತಿಯ ಜೀವನದಲ್ಲಿ ಅಧಿಕ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಅನೇಕ ಖಾಯಿಲೆಯಿಂದ ಬಳಲುತ್ತಾರೆ.

astrology , jyothishya , horoscope

ತಕ್ಷಕ ಕಾಳ ಸರ್ಪ ಯೋಗ
ಈ ಯೋಗದಲ್ಲಿ ವ್ಯಕ್ತಿ ಎಲ್ಲಾ ಬಗೆಯ ವ್ಯಸನಗಳಿಗೂ ಬಲಿಯಾಗುತ್ತಾನೆ. ಇವರ ವ್ಯಸನದಿಂದಾಗಿಯೇ ಸಾಕಷ್ಟು ತೊಂದರೆಗಳು ಉಂಟಾಗುವುದು. ಕುಟುಂಬ ಜೀವನದಲ್ಲಿ ಅಧಿಕ ಸಮಸ್ಯೆಯನ್ನು ಅನುಭವಿಸಬೇಕಾಗುವುದು. ಕುಂಡಲಿಯ 7ನೇ ಮನೆಯಲ್ಲಿ ರಾಹು ಮತ್ತು 1ನೇ ಮನೆಯಲ್ಲಿ ಕೇತು ಇದ್ದರೆ ತಕ್ಷಕ ಕಾಳಸರ್ಪ ಯೋಗ ಎಂದು ಪರಿಗಣಿಸಲಾಗುವುದು.

ಶೇಷ ಕಾಳ ಸರ್ಪಯೋಗ
ಕುಂಡಲಿಯ 12ನೇ ಮನೆಯಲ್ಲಿ ರಾಹು, 6ನೇ ಮನೆಯಲ್ಲಿ ಕೇತು ಇದ್ದರೆ ಶೇಷ ಕಾಳಸರ್ಪ ಯೋಗ ಎನ್ನಲಾಗುತ್ತದೆ. ಈ ಸಮಸ್ಯೆಯ ಪ್ರಭಾವದಿಂದ ವ್ಯಕ್ತಿ ಜೀವನದಲ್ಲಿ ಸಾಕಷ್ಟು ದೌರ್ಭಾಗ್ಯವನ್ನು, ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು.

ಘಟಕ ಕಾಳ
ಘಟಕ ಕಾಳ ಸರ್ಪಯೋಗವು ಇದ್ದರೆ ವ್ಯಕ್ತಿ ಜೀವನದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷೆಯನ್ನು ಅನುಭವಿಸುವನು. ಕುಂಡಲಿಯ 10ನೇ ಮನೆಯಲ್ಲಿ ರಾಹು ಮತ್ತು 4ನೇ ಮನೆಯಲ್ಲಿ ಕೇತು ಇದ್ದರೆ ಘಟಕ ಕಾಳ ಸರ್ಪಯೋಗವು ಕಾಡುವುದು.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಕಾಳ ಸರ್ಪ ಯೋಗಕ್ಕೆ ಪರಿಹಾರ ಕ್ರಮಗಳು
ಈ ಯೋಗಗಳು ಅತ್ಯಂತ ಹಾನಿಕಾರಕ ಹಾಗೂ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಲು ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಬೇಕು.

ಬೆಳ್ಳಿಯಿಂದ ಮಾಡಿದ ಜೋಡಿ ನಾಗ ಹಾಗೂ ಮೊಟ್ಟೆಯನ್ನು ಸುಬ್ರಹ್ಮಣ ದೇವಸ್ಥಾನಕ್ಕೆ ಅಥವಾ ಗರುಡ ಗೋವಿಂದ ದೇವಸ್ಥಾನಕ್ಕೆ ಅರ್ಪಿಸಿ.

ನಿತ್ಯವೂ ಪಂಚಾಕ್ಷರಿ ಮಂತ್ರ, ಮಹಾ ಮೃತ್ಯುಂಜಯ ಜಪವನ್ನು 108 ಬಾರಿ ಮಾಡಬೇಕು. ಅವು ಕುಂಡಲಿಯಲಿರುವ ದೋಷಗಳನ್ನು ನಿಯಂತ್ರಿಸುತ್ತವೆ.

ನಿತ್ಯವೂ 108 ಬಾರಿ ರಾಹುವಿನ ಬೀಜ ಮಂತ್ರವನ್ನು ಜಪಿಸಿ.

ಪ್ರತಿ ಶನಿವಾರ ಅಶ್ವತ್ಥ ಮರಕ್ಕೆ ಪೂಜೆ ಹಾಗೂ ನೀರನ್ನು ಎರೆಯಬೇಕು. ಇದು ಅತ್ಯಂತ ಫಲಪ್ರದವಾದ ಪರಿಣಾಮವನ್ನು ನೀಡುವುದು.

ನಾಗರ ಪಂಚಮಿಯ ದಿನ ಉಪವಾಸ ಕೈಗೊಳ್ಳುವುದು, ಶ್ರೀ ಕೃಷ್ಣ ದೇವರ ಹೆಸರಿನಲ್ಲಿ 11 ತೆಂಗಿನ ಕಾಯನ್ನು ನೀರಿನಲ್ಲಿ ಬಿಡಬೇಕು. ಅದು ಪಂಚಮಿಯ ದಿನ ಸಾಧ್ಯವಾಗದೆ ಇದ್ದರೆ ಶನಿವಾರ ಈ ಕ್ರಮವನ್ನು ಕೈಗೊಳ್ಳಬಹುದು.

ಲೋಹದಿಂದ ಮಾಡಿದ ನಾಗ ಮತ್ತು ನಾಗಿಣಿಯ 108 ಜೋಡಿಯನ್ನು ಶನಿವಾರ ನದಿ ನೀರಿಗೆ ಬಿಡಬೇಕು.

ಸೋಮವಾರ ರುದ್ರಾಭಿಷೇಕ ಮಾಡಿಸಿ.

ನಿತ್ಯವೂ ಕಾಳಸರ್ಪ ಗಾಯತ್ರಿ ಮಂತ್ರವನ್ನು ಜಪಿಸುವುದು ಅತ್ಯಂತ ಫಲಪ್ರದ ವಿಧಾನ. ಇವುಗಳಿಂದ ನಮಗೆ ಅಂಟಿರುವ ದೋಷವನ್ನು ನಿಯಂತ್ರಿಸಬಹುದು ಎಂದು ಹೇಳಲಾಗುವುದು.

Tags: #astrology#saakshatvjyopthishya
ShareTweetSendShare
Join us on:

Related Posts

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

by Honnappa Lakkammanavar
May 31, 2023
0

ದಾಂಪತ್ಯ ಉತ್ತಮವಾದಾಗ ಅದು ಕುಟುಂಬದಲ್ಲಿ ಪತಿ-ಪತ್ನಿ ಪರಸ್ಪರ ನಿಜವಾದ ಪ್ರೀತಿಯನ್ನು ಹೊಂದಿದ್ದರೆ ಮಾತ್ರ ಸಾಧ್ಯ. ಅದಿಲ್ಲದೇ ನೋಡಿದಾಗಲೆಲ್ಲ ಸಿಟ್ಟು ಮಾಡಿಕೊಂಡರೆ, ನೋಡಿದಾಗಲೆಲ್ಲ ಜಗಳವಾಡುತ್ತಾ, ವ್ಯರ್ಥವಾಗಿ ಜಗಳವಾಡಿದರೆ ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ,...

ಕೋಟಿಗಟ್ಟಲೆ ಸಾಲದ ಹೊರೆ ಹೊತ್ತಿದ್ದರೂ ಮನೆಗೆ ಬರಲು ಈ ಒಂದು ಚಿತ್ರ ಸಾಕು. ದೊಡ್ಡ ಸಾಲದ ಹೊರೆ ಸ್ವಲ್ಪಮಟ್ಟಿಗೆ ಕಣ್ಮರೆಯಾಗುತ್ತದೆ!

ಕೋಟಿಗಟ್ಟಲೆ ಸಾಲದ ಹೊರೆ ಹೊತ್ತಿದ್ದರೂ ಮನೆಗೆ ಬರಲು ಈ ಒಂದು ಚಿತ್ರ ಸಾಕು. ದೊಡ್ಡ ಸಾಲದ ಹೊರೆ ಸ್ವಲ್ಪಮಟ್ಟಿಗೆ ಕಣ್ಮರೆಯಾಗುತ್ತದೆ!

by Honnappa Lakkammanavar
May 30, 2023
0

ಇಂದಿನ ಪರಿಸರದಲ್ಲಿ ಈ ಸಾಲದ ಹೊರೆ ಪ್ರತಿ ಕುಟುಂಬವನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಪ್ರತಿಯೊಬ್ಬರೂ ಸಾಲವನ್ನು ಖರೀದಿಸಲು ಇಷ್ಟಪಡುವುದಿಲ್ಲ. ಅನಾವಶ್ಯಕ ಖರ್ಚಿಗೆ ಖರೀದಿಸಿ...

ಕುಬೇರನನ್ನು ಹೀಗೆ ಪೂಜಿಸಿದರೆ ವಿಜಯ ಸಂಚಯವಾಗುತ್ತಾ? ಕುಬೇರನ ಬಗ್ಗೆ ತಿಳಿಯದ ರಹಸ್ಯಗಳು!

ಕುಬೇರನನ್ನು ಹೀಗೆ ಪೂಜಿಸಿದರೆ ವಿಜಯ ಸಂಚಯವಾಗುತ್ತಾ? ಕುಬೇರನ ಬಗ್ಗೆ ತಿಳಿಯದ ರಹಸ್ಯಗಳು!

by Honnappa Lakkammanavar
May 30, 2023
0

ನವನಿಧಿಯ ಅಧಿಪತಿ ಕುಬೇರ! ಗುರುವಾರದಂದು ಸಂಪತ್ತಿನ ಈ ಅಧಿಪತಿಯನ್ನು ಪೂಜಿಸುವವರಿಗೆ ಹೇರಳವಾದ ಸಂಪತ್ತು ದೊರೆಯುತ್ತದೆ ಎಂದು ನಂಬಲಾಗಿದೆ. ಕುಬೇರನ ಬಗ್ಗೆ ತಿಳಿಯದ ರಹಸ್ಯಗಳು ಮತ್ತು ಕುಬೇರನನ್ನು ಪೂಜಿಸುವುದು ಹೇಗೆ ಯಶಸ್ಸಿಗೆ...

ಕೇವಲ ಒಂದು ವೀಳ್ಯದೆಲೆಯನ್ನು ಮಾಡಿ ಮತ್ತು ಅದನ್ನು ನಿಮ್ಮ ಬಕೆಟ್‌ ನಲ್ಲಿ ಇರಿಸಿ ದೂರದಲ್ಲಿರುವ ಅದೃಶ್ಯ ಶತ್ರುವನ್ನೂ ಓಡಿಸಿ….!

ಕೇವಲ ಒಂದು ವೀಳ್ಯದೆಲೆಯನ್ನು ಮಾಡಿ ಮತ್ತು ಅದನ್ನು ನಿಮ್ಮ ಬಕೆಟ್‌ ನಲ್ಲಿ ಇರಿಸಿ ದೂರದಲ್ಲಿರುವ ಅದೃಶ್ಯ ಶತ್ರುವನ್ನೂ ಓಡಿಸಿ….!

by Honnappa Lakkammanavar
May 29, 2023
0

ಈಗಿನ ಕಾಲದಲ್ಲಿ ಮಿತ್ರರಿರಲಿ ಇಲ್ಲದಿರಲಿ ಎಲ್ಲರಿಗೂ ಶತ್ರುಗಳಿರುತ್ತಾರೆ. ಅವೆಲ್ಲವೂ ನಮಗೆ ಕಾಣಿಸಬೇಕಿಲ್ಲ. ಈಗ ನಮ್ಮೊಂದಿಗೆ ಇದ್ದು ನಮಗೆ ಒಳ್ಳೆಯದನ್ನು ಮಾಡಲು ಪ್ರಯತ್ನಿಸುವ ಅನೇಕ ಶತ್ರುಗಳು ಇದ್ದಾರೆ. ಅಂತಹ ಶತ್ರುಗಳಿಂದ ನಮ್ಮನ್ನು...

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ

by Honnappa Lakkammanavar
May 29, 2023
0

ನಾವು ನಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗಳಲ್ಲಿ ಓದುವಂತೆ ಮಾಡುತ್ತೇವೆ, ಇದರಿಂದ ನಾವು ಕಷ್ಟಪಟ್ಟರೂ ಅವರು ಓದಬಹುದು ಮತ್ತು ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲಾ ಮಕ್ಕಳು ಒಳ್ಳೆಯ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರಿದ ಅತಿಥಿ ಡಿಕೆಶಿ!?

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರಿದ ಅತಿಥಿ ಡಿಕೆಶಿ!?

May 31, 2023
ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram