ಅಥಣಿ | ಸಾಲದ ಶೂಲಕ್ಕೆ ರೈತ ಬಲಿ
ಅಥಣಿ : ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.
44 ವರ್ಷದ ರವೀಂದ್ರ ದಾನಸೂರ ಆತ್ಮಹತ್ಯೆ ಮಾಡಿಕೊಂಡಿರುವ ರೈತನಾಗಿದ್ದಾನೆ. ಈತ ಮನೆ ಪಕ್ಕದ ಶೆಡ್ನಲ್ಲಿ ನೇಣಿಗೆ ಶರಣಾಗಿದ್ದಾರೆ.
ರವೀಂದ್ರ ಕೃಷಿಗಾಗಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ 5 ಲಕ್ಷ, ಪಿಕೆಪಿಎಸ್ ಬ್ಯಾಂಕ್ ನಲ್ಲಿ 1 ಲಕ್ಷ ಹಾಗೂ ಇತರ ಸ್ವಸಹಾಯ ಸಂಘಗಳ ಮುಖಾಂತರ 3 ಲಕ್ಷ ಸೇರಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಸಾಲ ಹೊಂದಿದ್ದರು.
ಆದ್ರೆ ಬೆಳೆ ಕೈಗೆ ಬಾರದ ಹಿನ್ನೆಲೆ ಸಾಲಭಾದೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.