mamatha banerjee, west bengal cm
ದೀದಿ ಮೇಲಿನ ಹಲ್ಲೆ ಪ್ರಕರಣ: TMC ವ್ಯವಸ್ಥಿತ ನಾಟಕವೇ ಗೊತ್ತಾಗಬೇಕಿದೆ – ದಿಲೀಪ್ ಘೋಷ್
ಪಶ್ಮಿಮ ಬಂಗಾಳ : ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ವಾಪಸ್ ಆಗುತ್ತಿದ್ದ ವೇಳೆ ಅಪರಿಚಿತರು ಅವರು ಮೇಲೆ ಹಲ್ಲೆ ನಡೆಸಿದ್ದರು. ಇದರಲ್ಲಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ಕೈವಾಡವಿದೆ ಎಂದು TMC ನಾಯಕರು ಆರೋಪ ಮಾಡಿದ್ದರು. ಇದೀಗ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ಅಚ್ಚರಿ ಮೂಡಿಸಿದೆ. ಹೌದು ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ದಿಲೀಪ್ ಘೋಷ್ ಆಗ್ರಹಿಸಿದ್ದಾರೆ.
`ಸಿಡಿ ಕೇಸ್ ಎಸ್ಐಟಿ ತನಿಖೆಗೆ ಒಪ್ಪಿಸಿರುವುದು ತಿಪ್ಪೆ ಸಾರಿಸುವ ಕೆಲಸ’
ಹೌದು ರಾಜ್ಯದ ಜನರಿಂದ ಸಿಂಪತಿ ಗಿಟ್ಟಿಸಿಕೊಂಡು ವೋಟ್ ಪಡೆಯಲು ಇದೊಂದು ನಾಟಕವೇ ಅಥವಾ ನಿಜವಾಗಿಯೂ ಮುಖ್ಯಮಂತ್ರಿಗಳ ಮೇಲೆ ಹಲ್ಲೆ ನಡೆದಿದೆಯೇ ಎಂಬುದು ರಾಜ್ಯದ ಜನರಿಗೆ ಗೊತ್ತಾಗಬೇಕು. ಹೀಗಾಗಿ ಸಿಬಿಐ ತನಿಖೆಯಾಗಿ ಸತ್ಯ ಆಚೆ ಬರಬೇಕೆಂದು ಒತ್ತಾಯಿಸಿದ್ದಾರೆ.
ಶಿವಣ್ಣನ 125ನೇ ಸಿನಿಮಾ ಘೋಷಣೆ : 4ನೇ ಬಾರಿಗೆ ಒಂದಾದ ಭಜರಂಗಿ ಕಾಂಬೋ..!
ಅಲ್ಲದೇ ಈ ಬಗ್ಗೆ ಮಾತನಾಡಿರುವ ಅವರು ಈ ಹಿಂದೆ ಕೂಡ TMC ನಾಯಕರ ನಾಟಕಗಳನ್ನು ಜನ ನೋಡಿದ್ದಾರೆ. ನಿಜಾಂಶ ಏನೆಂಬುದು ತನಿಖೆಯಿಂದ ಬಹಿರಂಗವಾಗಬೇಕು. ಝಡ್ + ಭದ್ರತೆ ಹೊಂದಿರುವ ವ್ಯಕ್ತಿ ಮೇಲೆ ಇಂತಹ ದಾಳಿ ನಡೆಯಲು ಹೇಗೆ ಸಾಧ್ಯ. ಈ ಬಗ್ಗೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ದರ್ಶನ್ ಸಿನಿಮಾ `ರಾ’BUT : ಬಿಲ್ಡಪ್ ಇಲ್ಲದ ರಾಬರ್ಟ್ ರಿವ್ಯೂವ್
mamatha banerjee, west bengal cm