ರೊಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡುವ ಬದ್ಧತೆ ನಮ್ಮದಲ್ಲ ಎಂದ ಬಾಂಗ್ಲಾದೇಶ
ಬಾಂಗ್ಲಾದೇಶ: ಅಂಡಮಾನ್ ಸಮುದ್ರದಲ್ಲಿ ಎರಡು ವಾರಗಳಿಂದ ಅತಂತ್ರ ಸ್ಥಿತಿಯಲ್ಲಿ ತೇಲುತ್ತಿರುವ 81 ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರಿಗೆ ಆಶ್ರಯ ನೀಡುವ ಬದ್ಧತೆ ಬಾಂಗ್ಲಾ ದೇಶಕ್ಕೆ ಇಲ್ಲ. ನಿರಾಶ್ರಿತರಿಗೆ ಸಮೀಪದಲ್ಲಿರುವ ದೇಶವಾಗಿರುವ ಭಾರತ ಅಥವಾ ರೊಹಿಂಗ್ಯಾರ ದೇಶವಾಗಿರುವ ಮ್ಯಾನ್ಮಾರ್ ಅವರಿಗೆ ಆಶ್ರಯ ಕೊಡಬಹುದು ಎಂದು ನಿರೀಕ್ಷಣೆಯಲ್ಲಿದ್ದೇವೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮುಮೆನ್ ಹೇಳಿದ್ದಾರೆ.
PUBG ಪಾರ್ಟ್ ನರ್ ಪ್ರೀತಿಗೆ ಬಿದ್ದ ವಿವಾಹಿತಿ : ಇನಿಯನ ನೋಡಲು ಬಂದಾಕೆಗೆ ಬಿಗ್ ಶಾಕ್.!
ಮೊದಲೇ ಬಾಂಗ್ಲಾದೇಶದ ಅಕ್ರಮ ವಲಸಿಗರು ಭಾರತವನ್ನ ಅಕ್ರಮವಾಗಿ ಪ್ರವೇಶಿಸಿರುವುದಕ್ಕೆ ಭಾರತೀಯರ ವಿರೋಧವಿದೆ. ಇದರ ನಡುವೆ ಬಾಂಗ್ಲಾದೇಶದ ಹೇಳಿಕೆ ಮತ್ತಷ್ಟು ಕೆರಳುವಂತೆ ಮಾಡಿದೆ.
ಅಂದ್ಹಾಗೆ ಪ್ರಕರಣ ಹಿನ್ನೆಲೆ
ಕೆಲ ದಿನಗಳಿಂದ ಮೀನುಗಾರಿಕಾ ದೋಣಿಯೊಂದರಲ್ಲಿ ರೊಹಿಂಗ್ಯಾ ಮುಸ್ಲಿಮ್ ರು ತೇಲುತ್ತಿರುವುದನ್ನ ನಿರಾಶ್ರಿತರನ್ನು ಭಾರತೀಯ ತಟರಕ್ಷಣಾ ಪಡೆ ಪತ್ತೆಹಚ್ಚಿದೆ. ದೋಣಿಯಲ್ಲಿ 8 ಮಂದಿಯ ಮೃತದೇಹಗಳೂ ಪತ್ತೆಯಾಗಿವೆ. ಅವರಿಗೆ ಊಟ ನೀರು ನೀಡಿದೆ. ಅಂತೆಯೇ ಅವರನ್ನ ಬಾಂಗ್ಲಾದೇಶಕ್ಕೆ ಕಳುಹಿಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಆದ್ರೆ ಪತ್ತೆಯಾದ ನಿರಾಶ್ರಿತರ ಆಶ್ಯರದ ಬಾಧ್ಯತೆ ನಮ್ಮದಲ್ಲ ಎಂದು ಬಾಂಗ್ಲಾ ದೇಶವು ಹೇಳಿಕೊಂಡಿದೆ ಎಂದು ವರದಿಯಾಗಿದೆ.
ಮದುವೆಗೆ ನಿರಾಕರಿಸಿದ ಯುವತಿಯ ಮೇಲೆ ನಿರಂತರ 8 ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ