ಬೈ ಎಲೆಕ್ಷನ್ ರಿಸಲ್ಟ್ : ಬಸವ ಕಲ್ಯಾಣ ಯಾರ ಪಾಲು..? basavakalyana
ಬೆಂಗಳೂರು : ಇಂದು ಬೆಳಗಾವಿ ಲೋಕಸಭಾ, ಮಸ್ಕಿ ಹಾಗೂಬಸವ ಕಲ್ಯಾಣ ವಿಧಾನಸಭೆ ಉಪಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನ ನಡೆಸಿದೆ.
ಬಸವ ಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಶರಣಬಸಪ್ಪ, ಕಾಂಗ್ರೆಸ್ ನಿಂದ ಮಾಲಾ ಬಿ ನಾರಾಯಣರಾವ್ , ಜೆಡಿಎಸ್ ನಿಂದ ಸೈಯದ್ ಯಸರಬ್ ಆಲಿ ಖಾದರಿ ಸೇರಿದಂತೆ 12ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.
ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆಯಾ ಕ್ಷೇತ್ರದಲ್ಲಿ ಆರಂಭವಾಗಲಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.