ಆಸ್ಪತ್ರೆಯಲ್ಲಿ ಬೆಡ್ ಗಾಗಿ ಕಿತ್ತಾಟ : ಓರ್ವ ಸಾವು uttharpradesh
ಲಕ್ನೋ : ಉತ್ತರಪ್ರದೇಶದ ಶಹಜಾನ್ ಪುರದ ಆಸ್ಪತ್ರೆಯಲ್ಲಿ ರೋಗಿಗಳಿಬ್ಬರು ಬೆಡ್ ಗಾಗಿ ಕಿತ್ತಾಡಿಕೊಂಡು ಜಗಳದಲ್ಲಿ ಒಬ್ಬ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನ ಹಂಸರಾಜ್ ಎಂದು ಗುರುತಿಸಿಲಾಗಿದೆ. ಅಬ್ದುಲ್ ರೆಹಮಾನ್ ಆರೋಪಿಯಾಗಿದ್ದಾನೆ.
ಈ ಇಬ್ಬರು ರೋಗಿಗಳಿಗೆ 21, 27ನೇ ಬೆಡ್ ನೀಡಲಾಗಿತ್ತು. ಅಬ್ದುಲ್ ಬೆಡ್ ನಿಂದ ಎದ್ದು ಮುಖವನ್ನು ತೊಳೆಯಲು ಹೋಗಿದ್ದನು.
ತನ್ನ ಬೆಡ್ ಗೆ ಹೋಗುವುದನ್ನು ಮರೆತು ಹಂಸರಾಜನ ಬೆಡ್ ಗೆ ಹೋಗಿ ಮಲಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ.
ಇಬ್ಬರ ಕಿತ್ತಾಟದಲ್ಲಿ ಅಬ್ದುಲ್ ಹಂಸರಾಜ್ ನನ್ನು ಎತ್ತಿಹಾಕಿದ್ದಾನೆ. ಈ ವೇಳೆ ಹಂಸರಾಜ್ ಪ್ರಾಣ ಬಿಟ್ಟಿದ್ದಾನೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿದ್ದು ಅಬ್ದುಲ್ ರೆಹಮಾನ್ ಮತ್ತು ಈತನ ತಂದೆಯನ್ನು ಬಂಧಿಸಿದ್ದಾರೆ.