ಸಂಕ್ರಾಂತಿ ಹಬ್ಬದಂದೆ ‘ಭೈರವ’ನ ಮೂಹರ್ತ
ಸಂಕ್ರಾಂತಿ ಹಬ್ಬದಂದೆ ಭಜರಂಗಿ ಆಶೀರ್ವಾದ ಪಡೆದು “ಭೈರವ” ಚಿತ್ರ ಇಂದು ಮೂಹರ್ತ ಕಾರ್ಯದಿಂದ ಚಿತ್ರೀಕರಣ ಪ್ರಾರಂಭಿಸಿದೆ.ಈ ಹಿಂದೆ ಮುಂಬಯಿ ಅಲ್ಲಿ ಟೈಟಲ್ ಲಾಂಚ್ ಮಾಡಿ ಸುದ್ದಿಯಾಗಿದ್ದ ರಾಮತೇಜ್ ನಿರ್ದೇಶನದ ಭೈರವ ಇಂದು ಮೂಹರ್ತ ಕಾರ್ಯ ಮಾಡುವ ಮೂಲಕ ಚಿತ್ರೀಕರಣ ಪ್ರಾರಂಭಿಸಿದೆ.
ಇನ್ನೂ ಮೂಹರ್ತ ಕಾರ್ಯವು ದೂರದ ಉತ್ತರಪ್ರದೇಶದ ಗೋವಿಂದಪುರಿ ನಗರದ ಹನುಮಾನ್ ದೇವಸ್ಥಾನದಲ್ಲಿ ಜರುಗಿತು. ಉತ್ತರಪ್ರದೇಶದ ಬಿಜೆಪಿಯ ಮಖಂಡರಾದ ಡಾ.ಮಂಜು ಶಿವಾಜ್ ಅವರು ಮುಖ್ಯ ಅತಿಥಿಯಾಗಿ,ಕ್ಲಾಪ್ ಚಾಲನೆಯನ್ನು ಚಿದಂಬರ ಕುಲಕರ್ಣಿ ಹಾಗೂ ಕಾಮೆರಾ ಚಾಲನೆಯನ್ನು ವೈಭವ ಬಜಾಜ್ & ಹನಿ ಚೌಧರಿ (ವಿಸಿಕಾ ಫಿಲ್ಮ್ಸ್ ಸಂಸ್ಥೆ) ಸೇರಿ ಅದ್ದೂರಿಯಾಗಿ ಪ್ರಾರಂಭಿಸಿದರು.
ಉಳಿದಂತೆ ಚಿತ್ರದ ಕಮರೊಟ್ಟು ಚೆಕ್ಪೋಸ್ಟ್ ಖ್ಯಾತಿಯ ನಾಯಕ ಸನತ್,ನಾಯಕಿಯಾಗಿ ಒಂದು ಮೊಟ್ಟೆ ಖ್ಯಾತಿಯ ಶೈಲಶ್ರಿ ಮುಲ್ಕಿ ಹಾಗೂ ಖಳನಾಯಕನಾಗಿ ಉಮೇಶ ಸಕ್ಕರೆನಾಡು ಹಾಗೂ ಛಾಯಾಗ್ರಹಕರಾದ ಸಂದೀಪ್ ಫ್ರೇಡ್ರಿಕ್ ಕ್ರಿಯಾಶೀಲ ನಿರ್ದೇಶಕ ಕಪಿಲ್ ದೀಕ್ಷಿತ್,ಸಹಾಯಕ ನಿರ್ದೆಶಕ ಕರೆಣ್ ಕ್ಷೀತಿ ಸುವರ್ಣ ಸೇರಿದಂತೆ ಮೀರತ್ ನಗರದ ಖ್ಯಾತ ವಕೀಲರಾದ ರಾಜಕುಮಾರ ಗುಪ್ತಾ ಮತ್ತು ಡಾ.ಸಂಜೀವ ಚೌಧರಿ ಏಲ್ಲಾರೂ ಉಪಸ್ಥಿತರಿದ್ದರು.