“ಭಜರಂಗಿ”ಗೆ ಶುಭಾಶಯ ತಿಳಿಸಿದ ಟಾಲಿವುಡ್ “ಆರ್ಯ”..!
ಅಕ್ಟೋಬರ್ 29 ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಭಗರಂಗಿ 2 ಸಿನಿಮಾ ಬೆಳ್ಳಿ ತೆರೆ ಮೇಲೆ ಬರಲಿದೆ. ಶಿವಣ್ಣ ಅಭಿಮಾನಿಗಳಷ್ಟೇ ಅಲ್ಲದೇ ಬಹುತೇಕ ಜನರು ಭಜಜರಂಗಿಯನ್ನ ಬಿಗ್ ಸ್ಕ್ರೀನ್ ಮೇಲೆ ನೋಡಲು ಕಾತರರಾಗಿದ್ದಾರೆ.
ಎ. ಹರ್ಷ ಹಾಗೂ ಶಿವಣ್ಣನ ಕಾಂಬಿನೇಷನ್ ನಲ್ಲಿ ಭಜರಂಗಿ ಹಾಗೂ ವಜ್ರಕಾಯ ಸಿನಿಮಾಗಳು ಸೂಪರ್ ಹಿಟ್ ಆದ ನಂತರ ಇದೇ ಕಾಂಬೋ ಮಾಡ್ತಿರುವ ಮೂರನೇ ಸಿನಿಮಾ ಭಜರಂಗಿ 2.. ಈ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ ಮಾಡಿದೆ. ಮತ್ತೊಂದೆಡೆ ಇತ್ತೀಚೆಗಷ್ಟೇ ರಿಲೀಸ್ ಆದ ಟ್ರೇಲರ್ ಅಂತೂ ಸಿನಿಪ್ರಿಯರ ಕಾತರತೆ ಹೆಚ್ಚಿಸಿದೆ. ಅಷ್ಟರ ಮಟ್ಟಿಗೆ ಅದ್ಭುತವಾಗಿದೆ ಟ್ರೇಲರ್.
ಇನ್ನೂ ಇತ್ತೀಚೆಗೆ ನಡೆದ ಅದ್ಧೂರಿ ಪ್ರೀ ರಿಲೀಸ್ ವೇಳೆಯೂ ಅಪ್ಪು , ಶಿವಣ್ಣ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಇದೀಗ ಸಿನಿಮಾಗೆ ಹಾಗೂ ಶಿವಣ್ಣನಿಗೆ ಟಾಲಿವುಡ್ ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಶುಭಕೋರಿದ್ದಾರೆ.
ರೈತರೊಟ್ಟಿಗೆ ದಿನ ಕಳೆಯಲಿದ್ದಾರೆ ಚಾಲೆಂಜಿಂಗ್ ಸ್ಟಾರ್
ಅಂದ್ಹಾಗೆ ತೆಲುಗಿನ ‘ವರುಡು ಕಾವಾಲೇನು’ ಚಿತ್ರದ ಪ್ರೀ-ರಿಲೀಸ್ ಕಾರ್ಯಮದಲ್ಲಿ ನಟ ಅಲ್ಲು ಅರ್ಜುನ್ ಮಾತನಾಡುವಾಗ ವೇದಿಕೆಯ ಮೇಲೆ ನೀಡಿರುವ ಹೇಳಿಕೆ ಸದ್ಯ ವೈರಲ್ ಆಗಿದೆ. ಸಿನಿಮಾರಂಗದ ಒಳಗಿನ ಬದಲಾವಣೆಯನ್ನು ಅಲ್ಲು ಅರ್ಜುನ್ ಎತ್ತಿ ತೋರಿಸಿದ್ದಾರೆ. ಇದೇ ವೇಳೆ ಅಲ್ಲು ಅರ್ಜುನ್ ಶಿವರಾಜ್ ಕುಮಾರ್ ಅಭಿನಯದ ಕನ್ನಡದ ಭಜರಂಗಿ 2 ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಹೌದು ಕರ್ನಾಟಕದಲ್ಲಿ ಚಿತ್ರಮಂದಿರಗಳು ಭರ್ತಿಯಾಗುತ್ತಿವೆ ಇಲ್ಲಿ 100% ಆಕ್ಯೂಪೆನ್ಸಿಗೆ ಅವಕಾಶ ನೀಡಲಾಗಿದೆ. ಜೊತೆಗೆ ರಿಲೀಸ್ಗೆ ರೆಡಿ ಆಗಿರುವ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಚಿತ್ರಕ್ಕೆ ಒಳ್ಳೆದಾಗಲಿ ಎಂದು ಅಲ್ಲು ಅರ್ಜುನ್ ಶುಭ ಕೋರಿದ್ದಾರೆ.