ಬಿಗ್ ಬಾಸ್ 8 : ರಾಜ್ಯ ಪ್ರಶಸ್ತಿ ಸಿಕ್ಕ ಬಗ್ಗೆ ಹೇಳಿಕೊಂಡು ಭಾವುಕರಾದ ನಿರ್ಮಲಾ..!
ಬಿಗ್ ಬಾಸ್ ಕನ್ನಡ ಸಿಸನ್ 8 ರಲ್ಲಿ ಗಲಾಟೆ, ಗದ್ದಲ, ಎಲಿಮೇಶನ್ ಗೆ ನಾಮಿನೇಷನ್ , ಟಾಸ್ಕ್ ಗಳಳು ಎಲ್ಲಲವೂ ಶುರುವಾಗಿದೆ. ಇದೇ ರೀತಿ ಬಿಗ್ ಬಾಸ್ ಸ್ಪರ್ಧಿಗಳಿಗೆ ತಮ್ಮ ಜೀವನದ ಅನುಭವ ಬಿಚ್ಚಿಡುವ ಟಾಸ್ಕ್ ನೀಡಿತ್ತು. ಈ ವೇಳೆ ತಾವು ರಾಜ್ಯ ಪ್ರಶಸ್ತಿ ಪಡೆದ ಬಗ್ಗೆ ನಿರ್ಮಲಾ ಚನ್ನಪ್ಪ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ನಿರ್ಮಲಾ ಚನ್ನಪ್ಪ ಜನರ ನಡುವೆ ಅಷ್ಟು ಚಿರಪರಿಚಿತರಲ್ಲ. ಹಾಗೆ ನೋಡುದ್ರೆ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಗ ಸುದೀಪ್ ಅವರು ನಿರ್ಮಲಾ ಅವರನ್ನ ಪರಿಚಯ ಮಾಡಿಸಿದಾಗಲೂ ಅಷ್ಟಾಗಿ ಜನರಿಗೆ ಅವರ ಬಗ್ಗೆ ಗೊತ್ತಿರಲಿಲ್ಲ. ಆದ್ರೆ ಅವರು ರಾಜ್ಯ ಪ್ರಶಸ್ತಿ ಬವಿಜೇತೆ ಎನ್ನುವ ವಿಚಾರ ಆಶ್ಚರ್ಯ ಮೂಡಿಸಿತ್ತು.
‘ಮಿಸ್ ಇಂಡಿಯಾ ಸೌತ್’ ದಿವ್ಯಾ ಕಾಲೇಜಿನ ದಿನಗಳಲ್ಲಿ ಬಾಡಿ ಶೇಮಿಂಗ್ ಗೆ ಒಳಗಾಗಿದ್ದರಂತೆ..!
ಸದ್ಯ ನಟಿ ಮತ್ತು ಡಬ್ಬಿಂಗ್ ಕಲಾವಿದೆ ನಿರ್ಮಲಾ ಚನ್ನಪ್ಪ ತಾನು ಪ್ರಶಸ್ತಿ ಗೆದ್ದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಅಂದ್ಹಾಗೆ ಸುಮಾರು 10 ವರ್ಷಗಳಿಂದ ನಿರ್ಮಲಾ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಲು ಶ್ರಮ ಪಟ್ಟಿದ್ದರಂತೆ. ಕೆಲ ಸಿನಿಮಾಗಳಲ್ಲಿ ನಟಿಸಿದ್ರು ಕೊನೆಗೆ ಸಿನಿಮಾಗಳು ರಿಲೀಸ್ ಆಗದೇ ನಿರಾಸೆ ಅನುಭವಿಸುವಂತಾಗಿತ್ತು. ಬಳಿಕ ಕೆಲ ಧಾರಾವಾಹಿಗಳಲ್ಲಿ ಗುರುತಿಸಿಕೊಂಡೆ ಎಂದಿದ್ದಾರೆ. ಇದಾದ ಬಳಿಕ ಆಕೆ 3 ತಿಂಗಳ ಬಾಣಂತಿಯಾಗಿದ್ದಾಗ ಸುದರ್ಶನ್ ನಿರ್ದೇಶನದ ತಲ್ಲಣ ಸಿನಿಮಾದಲ್ಲಿ ನಟಿಸಿದ್ದರಂತೆ. ಇದೇ ಸಿನಿಮಾದಲ್ಲಿ ತಮ್ಮ ನಟನೆಗೆ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರಂತೆ. ಆದ್ರೆ ಇದಾದ ಬಳಿಕ ಕೆಲ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾದ ಹಿನ್ನೆಲೆ ಸಂದರ್ಶನಗಳಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಬಹಳ ಜನರಿಗೆ ಈ ಬಗ್ಗೆ ಗೊತ್ತಿಲ್ಲ ಎಂದು ಹೇಳಿಕೊಂಡು ಬಾವುಕರಾಗಿದ್ದಾರೆ ನಿರ್ಮಲಾ.