Bigg Boss 8 : ನನ್ನ ಪತ್ನಿಗೆ ಕಣ್ಣೀರು ಹಾಕುವುದು ಗೊತ್ತು, ಗನ್ ಹಿಡಿಯೋದು ಗೊತ್ತು..!
ಬಿಗ್ ಬಾಸ್ ಸಿಸನ್ 8ರಲ್ಲಿ ಸದ್ಯ ಹೆಚ್ಚಾಗಿ ಫೋಕಸ್ ಆಗ್ತಿರುವ ಮನೆ ಮಂದಿ ಎಲ್ಲರಿಂದಲೂ ಡಿಸ್ ಲೈಕ್ ಆಗಿರುವ ಸ್ಪರ್ಧಿ ನಿರ್ಮಲಾ ಚೆನ್ನಪ್ಪ. 5ನೇ ದಿನ ಬಿಗ್ ಬಾಸ್ ಕೊಟ್ಟಿದ್ದ ಟಾಸ್ಕ್ ನಲ್ಲಿ ಮನೆಯವರು ತಮಗೆ ಇಷ್ಟವಾದವರಿಗೆ ಲೈಕ್ ಕೊಟ್ಟು ಇಲ್ಲದವರಿಗೆ ಡಿಸ್ ಲೈಕ್ ಬ್ಯಾಡ್ಜ್ ನೀಡಬೇಕಾಗಿತ್ತು. ಆದ್ರೆ ಬಹುತೇಕ ಮನೆಯ ಎಲ್ಲಾ ಸ್ಪರ್ಧಿಗಳು ಸಹ ನಿರ್ಮಲಾರಿಗೆ ಡಿಸ್ ಲೈಕ್ ಬ್ಯಾಡ್ಜ್ ಕೊಟ್ಟಿದ್ರು. ಆದ್ರೆ ದಿವ್ಯಾ ಸುರೇಶ್ ಮಾತ್ರವೇ ನಿರ್ಮಲಾಗೆ ಲೈಕ್ ಬ್ಯಡ್ಜ್ ಕೊಟ್ಟು, ನಿರ್ಮಲಾ ಮನೆಯಲ್ಲಿ ಅವರು ಅವರಾಗಿಯೇ ಇದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ದೇ ನಿರ್ಮಲಾ ಸದ್ಯ ಮನೆಯ ಸದ್ಯಸರಿಂದ ನಿಷ್ಠೂರವಾಗಿದ್ದಾರೆ. ಆದ್ರೆ, ನಿರ್ಮಲಾ ಚೆನ್ನಪ್ಪ ಕಳೆದ ಎರಡು ದಿನಗಳಿಂದ ನಡೆದುಕೊಳ್ಳುತ್ತಿರುವ ರೀತಿ ಮನೆಯಲ್ಲಿರುವ ಇತರೆ ಸದಸ್ಯರಿಗೆ ಆತಂಕ ಸೃಷ್ಟಿಸಿದೆ. ಒಬ್ಬೊಬ್ಬರೆ ಕುಳಿತುಕೊಳ್ಳುತ್ತಿದ್ದಾರೆ, ಒಬ್ಬೊಬ್ಬರೆ ಮಾತನಾಡುತ್ತಿದ್ದಾರೆ, ರಾತ್ರಿ ಸಮಯ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಇದೆಲ್ಲವೂ ಸ್ಪರ್ಧಿಗಳಿಗೆ ಭಯ ಹುಟ್ಟಿಸಿದೆ. ಹೀಗಿರೋವಾಗ ನಿರ್ಮಲಾ ಬಗ್ಗೆ ಆಕೆಯ ಪತಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
BIGG BOSS 8 : ಜೈಲು ಸೇರಿದ ಮೊದಲ ಸ್ಪರ್ಧಿ ಧನುಶ್ರೀ..! ಕೇವಲ ಗಂಜಿ ಕುಡಿಯುವ ಶಿಕ್ಷೆ..!
ಹೌದು..ನಿರ್ಮಲಾ ಪತಿ ಸರ್ದಾರ್ ಅವರು ಫೇಸ್ಬುಕ್ ಲೈವ್ ನಲ್ಲಿ ಈ ಕುರಿತು ಮಾತನಾಡಿದ್ದು, ಬಿಗ್ ಬಾಸ್ ಎನ್ನುವುದು ಒಂದು ಆಟ. ಎಲ್ಲರು ಅಲ್ಲಿ ಸೇರಿರುವುದು ಊಟ ಮಾಡಿ ಮಲುಗುವುದಕ್ಕೆ ಹೋಗಿಲ್ಲ. ಪ್ರತಿಯೊಬ್ಬರು ಅವರವರ ಆಟಗಳನ್ನು ಶುರು ಮಾಡ್ತಾರೆ. ಪ್ರತಿಯೊಬ್ಬರು ಅವರಿಗೆ ಅನಿಸಿದ್ದನ್ನ ಮಾಡ್ತಾರೆ. ಅದಕ್ಕೂ ಮಿಗಿಲಾಗಿ ನಿರ್ಮಲಾ ಏನು ಎನ್ನುವುದು ನನಗೆ ಗೊತ್ತು. ಮುಂದಿನ ದಿನಗಳಲ್ಲಿ ಆಟ ಯಾವ ತಿರುವು ಪಡೆಯುತ್ತೆ ಕಾದು ನೋಡೋಣ. ಬಿಗ್ ಬಾಸ್ನಲ್ಲಿ ಮಜಾ ಇರಬೇಕು, ಅಲ್ಲಿ ಏನೇ ನಡೆದರು ಮನರಂಜನೆ ದೃಷ್ಟಿಯಿಂದ ಅಷ್ಟೇ. ನಾನು ಎಪಿಸೋಡ್ ನೋಡಿ ಖುಷಿ ಪಡ್ತೀನಿ ಅಷ್ಟೇ ಎಂದಿದ್ದಾರೆ. ಜೊತೆಗೆ ನಿರ್ಮಲಾ ಬಲಶಾಲಿಯಾಗಿದ್ದು, ಆಕೆಗೆ ಕಣ್ಣೀರು ಹಾಕೋಕು ಬರುತ್ತೆ , ಗನ್ ಹಿಡಿಯೋಕೆ ಬರುತ್ತೆ ಎಂದು ಪತ್ನಿ ಪರ ಬ್ಯಾಟ್ ಬೀಸಿದ್ದಾರೆ.