BIGG BOSS 8 : ಗಳಗಳನೆ ಕಣ್ಣೀರಿಟ್ಟ ದಿವ್ಯಾ, ಮನಸಾಕ್ಷಿ ಬಿಟ್ಟು ಸಮಾಧಾನ ಮಾಡೋದಕ್ಕೆ ಆಗಲ್ಲ ಎಂದ ಲ್ಯಾಗ್ ಮಂಜು..!
ಬಿಗ್ ಬಾಸ್ 8 ನೇ ಆವೃತ್ತಿ 2ನೇ ವಾರ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಮನುಷ್ಯರು ಮತ್ತು ವೈರಸ್ ಟಾಸ್ಕ್ ನಿಂದಾಗಿ ಮನೆಯಲ್ಲಿ ಗಲಾಟೆ ಗದ್ದಲಗಳು ಶುರುವಾಗಿದೆ. ಈ ನಡುವೆ ವೈರಸ್ ಟೀ ಸೋತು ಹೋಗಿದ್ದು, ವೈರಸ್ ತಂಡ ಸೋಲೋದಕ್ಕೆ ಪ್ರಮುಖ ಕಾರಣ ದಿವ್ಯಾ ಸುರೇಶ್ ಎಂದೇ ಮನೆ ಮಂದಿಯಲ್ಲಾ ಬಿಂಬಿಸುತ್ತಿದ್ದಾರೆ.
ಬುಧವಾರ ನಡೆದ ಈ ಟಾಸ್ಕ್ ನಲ್ಲಿ ಮನೆಯ ಸದಸ್ಯರ ನಿರ್ಲಕ್ಷ್ಯ ಕಂಡು ಗರಂ ಆಗಿದ್ದ ಬಿಗ್ ಬಾಸ್ ಟಾಸ್ಕ್ ಅನ್ನ ಅಲ್ಲಿಗೇ ರದ್ದುಗೊಳಿಸಿದ್ರು. ಈ ಆಟದಲ್ಲಿ ವೈರಸ್ ತಂಡ ಸೋಲನುಭವಿಸಿತ್ತು. ಮೊದಲನೇ ಭಾಗದಲ್ಲಿ ಅತಿ ಹೆಚ್ಚು ಬಾರಿ ಸೋತ್ರೂ 2ನೇ ಭಾಗದಲ್ಲಿ ಮನುಷ್ಯರ ತಂಡ ಗೆದ್ದಿತ್ತು. ಆದ್ರೆ ವೈರಸ್ ತಂಡದ ಸೋಲಿಗೆ ಪ್ರಮುಖ ಕಾರಣ ದಿವ್ಯಾ ಸುರೇಶ್ ಎಂದೇ ಚರ್ಚೆಗಳು ನಡೆದಿತ್ತು. ದಿವ್ಯಾ ಆಟವನ್ನ ಅರ್ಧಕ್ಕೆ ಕೈಬಿಟ್ಟಿದ್ದರು. ಇದೇ ಸೋಲಿಗೆ ಕಾರಣವಾಯ್ತು ಎಂದು ಮನೆ ಮಂದಿ ಅಭಿಪ್ರಾಯಗಳನ್ನ ಹೊರಹಾಕಿದ್ದರು. ಇದು ದಿವ್ಯಾ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ಇದರಿಂದಾಗಿ ದಿವ್ಯಾ ಗಳಗಳನೆ ಅತ್ತಿದ್ದರು. ಇತ್ತ ಮತ್ತೊಂದೆಡೆ ಲ್ಯಾಗ್ ಮಂಜು ನಾನು ಮನಸಾಕ್ಷಿ ಬಿಟ್ಟು ಹೋಗಿ ಸಮಾಧಾನ ಮಾಡಲು ಆಗಲ್ಲ ಎಂದು ಸಹ ಹೇಳಿದ್ದು, ಅವರು ಈ ರೀತಿ ಹೇಳಿದ್ದು ಯಾಕೆ ಎಂಬುದು ಸರಿಯಾಗಿ ಅರ್ಥವಾಗಿಲಿಲ್ಲ.
‘ಹರಿ ಹರ ವೀರ ಮಲ್ಲು’ ಆದ ಪವನ್ ಕಲ್ಯಾಣ್..!
ಇದೇ ವಿಚಾರವಾಗಿ ಮಂಜು ದಿವ್ಯಾ ಜೊತೆ ಬೆಳಿಗ್ಗೆ ಮಾತನಾಡಿ, ಪಂದ್ಯವನ್ನು ಯಾಕೆ ಅರ್ಧಕ್ಕೆ ಬಿಟ್ಟೆ. ಅಷ್ಟೇಲ್ಲಾ ಕಷ್ಟಪಟ್ಟು, ಅಷ್ಟು ಮಂದಿ ಹುಡುಗರ ಮದ್ಯೆ ಸಮವಾಗಿ ಆಟ ಆಡಿದ್ದೀಯಾ. ಏಕಾಂಗಿಯಾಗಿ ಆಟವಾಡಲು ಆರಂಭಿಸಿದಾಗ ನೀನು ನಿನ್ನ ಬಲವನ್ನು ತೋರಿಸಬೇಕಿತ್ತು. ಸೋತರೂ ಪರವಾಗಿಲ್ಲ ಕೇವಲ ಪಂದ್ಯದಲ್ಲಿ ಭಾಗವಹಿಸಬೇಕಾಗಿತ್ತು. ನೀನು ಒಬ್ಬಳು ಕ್ರೀಡಾಪಟುವಾಗಿ ನಿನ್ನ ಬಲವನ್ನು ಪ್ರದರ್ಶಿಸಬೇಕಿತ್ತು. ನೀನು ಮಾಡಿದ್ದು ತಪ್ಪಲ್ಲವ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ವಿಚಾರವಾಗಿ ನನಗೆ ನಿನ್ನ ಮೇಲೆ ಬಹಳ ಸಿಟ್ಟಿತ್ತು. ಹಾಗಾಗಿ ಸಲುಗೆಯಲ್ಲಿ ಏನಾದರೂ ತಪ್ಪಾಗಿ ಮಾತನಾಡಿಬಿಡುತ್ತೇನೆ ಎಂದು ನಾನು ನಿನ್ನೊಂದಿಗೆ ಮಾತನಾಡಿಲ್ಲ ಎಂದಿದ್ದಾರೆ.
ಅಲ್ದೇ ನಾವು ಇಲ್ಲಿಗೆ ಬರಲು ಬೇರೆಯವರ ಮಾತನ್ನು ಕೇಳಿಕೊಂಡು ಬಂದಿಲ್ಲಾ, ಬೇರೆ ಯಾರು ಹೇಗಾದರೂ ಆಡಿಕೊಳ್ಳಲಿ ಅದು ನಮಗೆ ಸಂಬಂಧವಿಲ್ಲದ ವಿಚಾರ. ನಾವು ನಮ್ಮ ಆಟವನ್ನ ಏಕಾಂಗಿಯಾಗಿ ಆಡಬೇಕು. ಕೊನೆಯವರೆಗೂ ಹೋರಾಡಬೇಕು. ನೀನು ಮಾಡಿದ್ದು 100% ತಪ್ಪು ಎಂದು ತಿಳಿ ಹೇಳಿದ್ದಾರೆ.
ಶಿವಣ್ಣನ 125ನೇ ಸಿನಿಮಾ ಘೋಷಣೆ : 4ನೇ ಬಾರಿಗೆ ಒಂದಾದ ಭಜರಂಗಿ ಕಾಂಬೋ..!
ಇದೇ ವೇಳೆ ಬೇಸರದಿಂದ ಮಾತನಾಡಿರೋ ದಿವ್ಯಾ ಪಂದ್ಯ ಸೋಲುವುದಕ್ಕೆ ನಾನೇ ಕಾರಣ ಎಂದು ಲ್ಯಾಗ್ ಮಂಜು ಹೇಳಿದ್ದಾರೆ ಎಂದು ಎಂದು ರಾಜೀವ್ ಹೇಳುತ್ತಿದ್ದರು ಎಂದಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಮಂಜು ಬೇರೆಯವರು ಹೇಳುವ ಮಾತನ್ನು ನೀನು ನಂಬಿ ಬಿಡುತ್ತೀಯಾ. ಹಾಗಾದ್ರೆ ನಿನ್ನ ಸ್ವಂತ ಬುದ್ದಿಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದ್ರು.
ಇದೇ ವೇಳೆ ಈ ಬಗ್ಗೆ ಇನ್ನೂ ಕೆಲ ಹೊತ್ತು ಇದೇ ವಿಚಾರವಾಗಿ ಲ್ಯಾಗ್ ಮಂಜು ಹಾಗೂ ದಿವ್ಯಾ ಮಾತಕತೆ ನಡೆಸಿದ್ದು, ಇನ್ಮುಂದೆ ಮತ್ತೆ ಈ ರೀತಿ ಮಾಡುವುದಿಲ್ಲ ಎಂದು ದಿವ್ಯಾ ಮಂಜು ಬಳಿ ಹೇಳಿಕೊಂಡಿದ್ದಾರೆ. ಬಳಿಕ ಮನೆಯವರ ಬಳಿಯೂ ದಿವ್ಯಾ ಕ್ಷಮೆ ಯಾಚಿಸಿದ್ದಾರೆ. ಇದೇ ವೇಳೆ ದಿವ್ಯಾಗೆ ಶುಭಾ ಪುಂಜಾ ಕೂಡ ಬುದ್ದಿ ಮಾತನ್ನ ಹೇಳಿದ್ದಾರೆ. ಮತ್ತೆ ದಿವ್ಯಾ ಕಣ್ಣೀರಿಟ್ಟಿದ್ದು, ಮಂಜು, ರಾಜೀವ್ ಹಾಗೂ ಶಮಂತ್ ಆಕೆಯನ್ನ ಸಮಾಧಾನ ಪಡಿಸಿದ್ರು.