ದಿವ್ಯಾ ಬಕೆಟ್ , ವೈಷ್ಣವಿ ಛತ್ರಿ ಅಂದಿದ್ದೇಕೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು..!
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾಗಿರುವ ಪ್ರಿಯಾಂಕಾ ತಿಮ್ಮೇಶ್ ಹಾಗೂ ವೈಜಯಂತಿ ಆಡಿಗ ಮನೆಯವರ ದೃಷ್ಟಿಯಲ್ಲಿ ನೆಗೆಟಿವ್ ಇಮೇಜ್ ಹುಟ್ಟುಹಾಕುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಹೌದು.. ಬಿಗ್ ಬಾಸ್ ಒಂದು ನೀಡಿದ್ದ ಒಂದು ಗೇಮ್ ನಲ್ಲಿ ವೈಜಯಂತಿ ದಿವ್ಯಾ ಸುರೇಶ್ ಗೆ ಬೇಸರ ಉಂಟು ಮಾಡಿದ್ದಾರೆ.
ಮನೆಯ ಗಾರ್ಡ್ನ್ ಏರಿಯಾದಲ್ಲಿರುವ ಒಂದು ಪೆಟ್ಟಿಗೆಯಲ್ಲಿ ಕೆಲವು ವಸ್ತುಗಳಿವೆ. ಅವುಗಳನ್ನು ತೆಗೆದುಕೊಂಡು ಸೂಕ್ತ ಕಾರಣಗಳನ್ನು ನೀಡಿ ಮನೆಯ ಸದಸ್ಯರಿಗೆ ನೀಡಬೇಕು ಎಂದು ಬಿಗ್ಬಾಸ್ ಹೇಳಿದ್ದರು. ಈ ವೇಳೆ ವೈಜಯಂತಿ ನಾನು ಛತ್ರಿಯನ್ನು ವೈಷ್ಣವಿಗೆ ನೀಡುತ್ತೇನೆ ಎಂದು ಕೆಲವು ಕಾರಣಗಳನ್ನು ಹೇಳಿದ್ದಾರೆ. ದಿವ್ಯಾ ಸುರೇಶ್ಗೆ ನಾನು ಬಕೆಟ್ ನೀಡುತ್ತನೆ. ಇವರಿಗೆ ಬಕೆಟ್ ಹಿಡಿದರೆ ದೊಡ್ಡ್ ಮನುಷ್ಯರು ಆಗುತ್ತಾರೆ ಎನ್ನುವ ಹಾಗೆ ಇದೆ ಎಂದು ಹೇಳುತ್ತಾ ದಿವ್ಯಾ ಅವರಿಗೆ ಬಕೆಟ್ ಕೊಟ್ಟಿದ್ದಾರೆ.
ಕಿರಿಕ್ ಪಾರ್ಟಿ ಟೀಮ್ ಗೆ ಕಾನೂನಿನ ಟೆನ್ಷನ್ ಶುರು…! ಆಗಿದ್ದೇನು..?