BIGBOSS : ನನ್ನ ತಂಟೆಗೆ ಬಂದ್ರೆ ಸುಮ್ಮನೆ ಇರಲ್ಲ – ಸಂಬರಗಿಗೆ ವಾರ್ನಿಂಗ್ ಕೊಟ್ಟ ಉರುಡುಗ..!
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ 5ನೇ ವಾರ ಮನೆಯಲ್ಲಿ ಗದ್ದಲ ಗಲಾಟೆ, ಕಿತ್ತಾಟ ಜೋರಾಗಿದೆ. ಈ ನಡುವೆ ಬಿಗ್ ಬಾಸ್ ಕೊಟ್ಟಿರುವ ಗಡಿಗೋಪುರ ಟಾಸ್ಕ್ ನಲ್ಲಿ ಜಾತ್ರೆ ತಂಡ ಹಾಗೂ ಅನುಬಂಧ ಟೀಮ್ ನಡುವೆ ಟಕ್ಕರ್ ಜೋರಾಗಿದೆ. ಆದ್ರೆ ಟಾಸ್ಕ್ ವೇಳೆ ಎರೆಡೂ ತಂಡಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಅ ರವಿಂದ್ ದಿವ್ಯಾ ಬಗ್ಗೆ ಸಂಬರಗಿ ಆಡಿದ ಆ ಒಂದು ಮಾತು ದೊಡ್ಡ ಗಲಾಟೆಗೆ ಕಾರಣವಾಗಿತ್ತು.
ಗಡಿಗೋಪುರ ಟಾಸ್ಕ್ ಅಂಗವಾಗಿ ಇಟ್ಟಿಗೆ ಹೊಡೆಯುವ ಸ್ಪರ್ಧೆಯಲ್ಲಿ ದಿವ್ಯ ಉರುಡುಗ ಕೈಯಲ್ಲಿದ್ದ ಇಟ್ಟಿಗೆಯನ್ನು ಪ್ರಶಾಂತ್ ಎಳೆದುಕೊಂಡು ಹೊಡೆದು ಹಾಕಿದರು. ಇದನ್ನು ಗಮನಿಸಿದ ಅರವಿಂದ್ ಇದು ಫೌಲ್ ಎಂದು ಪ್ರಶಾಂತ್ ವಿರುದ್ಧ ಆಕ್ರೋಶ ಹೊರಹಾಕಿದ್ರು. ಈ ವೇಳೆ ಪ್ರಶಾಂತ್ ನಿನಗೆ ನಿನ್ನ ಗರ್ಲ್ಫ್ರೆಂಡ್ ಕೈ ಹಿಡಿದಿದಕ್ಕೆ ಬೇಜಾರಾಗಿದಲ್ವ ಎಂದು ಪ್ರಶ್ನಿಸಿದರು. ಸಂಬರಗಿ ಹೀಗೆ ಹೇಳ್ತಿದ್ದಂತೆ ರೊಚ್ಚಿಗೆದ್ದ ದಿವ್ಯಾ ನೀವ್ಯಾರೀ ನನ್ನ ಬಗ್ಗೆ ಮಾತನಾಡೋಕೆ. ನೆಟ್ಟಗೆ ಮಾತನಾಡಿ ಎಂದು ಸಂಬರಗಿ ವಿರುದ್ಧ ಕೆಂಡಕಾರಿದ್ದಾರೆ.
ಈ ವೇಳೆ ರಾಜೀವ್ ಮಾತನಾಡಿದ್ದು, ಡೈರೆಕ್ಟ್ ಆಗಿ ಅರವಿಂದ್ ಜೊತೆ ಜಗಳ ಮಾಡು ಇದನ್ನು ಬಿಟ್ಟು ಹುಡುಗಿಯರ ಹೆಸರನ್ನು ಹೇಳಿಕೊಂಡು ಜಗಳ ಮಾಡಬೇಡ ಎಂದು ಸಂಬರಗಿಗೆ ಬೈದಿದ್ದಾರೆ. ಈ ಮಧ್ಯೆ ಮತ್ತೆ ಸಿಟ್ಟಿಗೆದ್ದ ದಿವ್ಯ ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ. ನೀವ್ಯಾರು ನನ್ನ ಬಗ್ಗೆ ಮಾತನಾಡೋಕೆ. ನಾನು ಅವರ ತೆಂಗಿನೋ, ಲವರ್, ಹೆಂಡತಿನೋ, ಸ್ನೇಹಿತೆನೋ ಅದು ನಿಮಗೆ ಬೇಡದ ವಿಚಾರ ಎಂದು ಸಂಬರಗಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಬ್ಯಾಂಕ್ ಆಫ್ ಇಂಡಿಯಾದ ಲಾಕರ್ ನಲ್ಲಿದೆ 2011ರ ವಿಶ್ವಕಪ್ ಕ್ರಿಕೆಟ್ ನ ಫೈನಲ್ ಪಂದ್ಯದ ಚೆಂಡು..!
ಬಾಲಿವುಡ್ ನ ಖ್ಯಾತ ನಟಿ, ಗಾಯಕಿ ಮತ್ತು ರಾಜಕಾರಣಿ ಕಿರಣ್ ಖೇರ್ ಗೆ ಕ್ಯಾನ್ಸರ್..!