ಬಿಜೆಪಿ ಸರ್ಕಾರ ಆಗಿರುವುದೇ ಭ್ರಷ್ಟಾಚಾರದಿಂದ : ವಾಟಾಳ್ ನಾಗರಾಜ್ ವಾಗ್ದಾಳಿ
ಮೈಸೂರು : ನಮ್ಮ ರಾಜ್ಯ ಬಸವಣ್ಣರ ರಾಜ್ಯ ಆಗಬೇಕು. ಈ ಸರ್ಕಾರ ಆಗಿರುವುದೇ ಭ್ರಷ್ಟಾಚಾರದಿಂದ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಮಾಫಿಯಾ ವಿಚಾರವಾಗಿ ಸರ್ಕಾರದ ವಿರುದ್ಧ ಕೆಂಡಕಾರಿದರು. ಜಿಲ್ಲೆಯಲ್ಲಿ ಭೂಮಾಫಿಯ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಅರಣ್ಯ ಭೂಮಿ, ಕೆರೆ ಒತ್ತುವರಿ ಆಗಿದೆ. ಈ ಬಗ್ಗೆ ಯಡಿಯೂರಪ್ಪ, ಧೈರ್ಯ ಮಾಡಿ ತನಿಖೆ ಮಾಡುತ್ತಾರೆ ಎಂಬುವ ನಂಬಿಕೆಯು ಇಲ್ಲ.
ರಾಜ್ಯದಲ್ಲಿ ಸತ್ಯವಂತರ ಸರ್ಕಾರ ಬರಬೇಕು. ನಮ್ಮ ರಾಜ್ಯ ಬಸವಣ್ಣರ ರಾಜ್ಯ ಆಗಬೇಕು. ಈ ಸರ್ಕಾರ ಆಗಿರುವುದೇ ಭ್ರಷ್ಟಾಚಾರದಿಂದ. ನನಗೆ ಜವಾಬ್ದಾರಿ ಕೊಟ್ಟರೆ 6 ತಿಂಗಳು ಸರ್ಕಾರ ನಡೆಸಿ ತೋರಿಸುವೆ ಎಂದು ಸರ್ಕಾರಕ್ಕೆ ಸವಾಲ್ ಎಸೆದರು.
ಇದೇ ವೇಳೆ ರೋಹಿಣಿ ಸಿಂಧೂರಿ ಪರ ಬ್ಯಾಟ್ ಬೀಸಿದ ವಾಟಾಳ್ ನಾಗರಾಜ್, ರೋಹಿಣಿ ಸಿಂಧೂರಿ ಒಬ್ಬ ದಕ್ಷ ಅಧಿಕಾರಿ. ತನಿಖೆ ಆಗುವ ಮೊದಲ ಓಡಿಸಿದ ಸರ್ಕಾರ ಇದು. ಮೈಸೂರಿನಲ್ಲಿ ಭ್ರಷ್ಟ ಕೂಟ ಲಕ್ಷ ಲಕ್ಷ ಕೋಟಿ ನುಂಗಿದ್ದಾರೆ. ಎಲ್ಲಾ ಬಹುತೇಕೆ ರಾಜಕರಿಣಿಗಳಿಂದಲೇ ನಡೆಯುತ್ತಿದೆ. ನಿಮಗೆ ಪ್ರಾಮಾಣಿಕತೆ ಇದ್ದರೆ ರೋಹಿಣಿ ಸಿಂಧೂರಿ ಅವರನ್ನೇ ತನಿಖೆಗೆ ನೇಮಿಸಿ ಎಂದು ಒತ್ತಾಯಿಸಿದ್ದಾರೆ.