ಬಿಜೆಪಿ ( BJP )ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದೆ : ಕಾಂಗ್ರೆಸ್
ಬೆಂಗಳೂರು : ವಿಧಾನಮಂಡಲದ ಉಭಯ ಸದನದಲ್ಲಿ ಲೋಕಸಭಾ ಸ್ಪೀಕರ್ ಅವರು ಭಾಷಣ ಮಾಡುವ ಬಗ್ಗೆ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಲೋಕಸಭಾ ಸ್ಪೀಕರ್ ಅವರು ವಿಧಾನಮಂಡಲದ ಉಭಯ ಸದನದಲ್ಲಿ ಭಾಷಣ ಮಾಡುವ ಬಗ್ಗೆ ಬಿಜೆಪಿ ಸರ್ಕಾರ ನಮ್ಮೊಂದಿಗೆ ಚರ್ಚಿಸಿಲ್ಲ.
ಹೀಗೆ ಭಾಷಣ ಮಾಡಿಸುವುದು ಸಂಸದೀಯ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಗರಂ ಆಗಿದೆ.
ಇನ್ನು ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದೆ ಬಿಜೆಪಿ.
ರಾಜ್ಯಪಾಲ, ರಾಷ್ಟ್ರಪತಿಗಳಿಗಷ್ಟೇ ಸದನದಲ್ಲಿ ಭಾಷಣಕ್ಕೆ ಅವಕಾಶವಿರುವುದು, ಆದರೆ ಲೋಕಸಭೆಯ ಸ್ಪೀಕರ್ ಅವರನ್ನ ಕರೆಸಿ ನಿಯಮ ಮೀರುತ್ತಿದೆ ಸರ್ಕಾರ.
ಯಾರ ಆದೇಶ ಪಾಲಿಸುತ್ತಿರುವಿರಿ ಬಿಜೆಪಿ? ನಾಗಪುರದ್ದೋ, ಸರ್ವಾಧಿಕಾರಿ ಜೋಡಿಯದ್ದೋ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.